ಸೋನಮ ವಾಂಗಚುಕರವರು ಉಪವಾಸ ಸತ್ಯಾಗ್ರಹ ಹಿಂಪಡೆದ ನಂತರ ಅಭಿಜಿತ ದೀಪಕೆಯವರ ಸ್ಪಷ್ಟನೆ

ನವದೆಹಲಿ – ಸಾಮಾಜಿಕ ಕಾರ್ಯಕರ್ತ ಸೋನಮ ವಾಂಗಚುಕರವರು ಸರಕಾರದ ಭರವಸೆಯ ನಂತರ ತಮ್ಮ ೨೬ ದಿನಗಳ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಇದರ ನಂತರ ‘ಕಾಕ್ರೋಚ್ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜಿತ ದೀಪಕೆಯವರು ‘ಎಕ್ಸ್’ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಜಂತರಮಂತರನಲ್ಲಿ ಕಾಕ್ರೋಚ್ ಜನತಾ ಪಕ್ಷದ ಶಾಂತಿಯುತ ಹೋರಾಟ ಮುಂದುವರಿಯಲಿದೆ, ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. “ಸೋನಮ ವಾಂಗಚುಕರವರು ೨೬ ದಿನಗಳ ನಂತರ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ ಎಂಬುದು ನಮಗೆ ತುಂಬಾ ಸಂತೋಷ ತಂದಿದೆ. ಸರ್, ನಿಮ್ಮ ಧೈರ್ಯ ಮತ್ತು ತ್ಯಾಗಕ್ಕೆ ಅಪಾರ ಧನ್ಯವಾದಗಳು. ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ನೀವು ಇಡೀ ದೇಶದ ಚೇತನವನ್ನು ಜಾಗೃತಗೊಳಿಸಿದ್ದೀರಿ. ನಿಮ್ಮ ಪ್ರಾಣ ಈ ದೇಶಕ್ಕೆ ಅತ್ಯಂತ ಅಮೂಲ್ಯವಾಗಿದೆ,” ಎಂದು ದೀಪಕೆ ಹೇಳಿದ್ದಾರೆ.
🚨 "Movement Does Not Stop!"
Following Sonam Wangchuk ending his hunger strike, activist Abhijit Dipke makes it clear: the protest against the Education Minister is far from over! ✊📢
Key updates:
🎯 Demand stands firm: Protest will continue until Education Minister Dharmendra… https://t.co/SiQyD0NPAC pic.twitter.com/cu4eUKUjcy— Sanatan Prabhat (@SanatanPrabhat) July 24, 2026
ಬಹುಶಃ ಇಂದು ರಾತ್ರಿ ನಮ್ಮನ್ನು ಬಂಧಿಸಬಹುದು? – ದೀಪಕೆಯವರು ಆತಂಕ ವ್ಯಕ್ತ
ದೀಪಕೆಯವರು, ಇಂದು ರಾತ್ರಿ ಬಹುಶಃ ಕಾಕ್ರೋಚ್ ಜನತಾ ಪಕ್ಷದ ಗುಂಪಿನ ಪ್ರತಿಯೊಬ್ಬರನ್ನೂ ಪೊಲೀಸರು ಬಂಧಿಸಬಹುದು. ನಾನು ಸರಕಾರಕ್ಕೆ ಕೇಳುವುದೇನೆಂದರೆ, ಬಂಧನ ಏಕೆ ಮಾಡಬೇಕು? ಕಳೆದ ೩೫ ದಿನಗಳಿಂದ ನಾವು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಸ್ವತಂತ್ರ ಭಾರತದಲ್ಲಿ ಇಷ್ಟು ಶಾಂತಿಯುತ ಹೋರಾಟ ಎಂದಾದರೂ ನಡೆದಿದೆಯೇ ಎಂದು ನನಗೆ ಅನಿಸುವುದಿಲ್ಲ. ನಾವು ಸಂವಿಧಾನದ ಮಾರ್ಗದಲ್ಲಿ ನಡೆಯುವ ಜನರು. ನಿಮಗೆ ಭಾರತದ ಸಂವಿಧಾನದ ಬಗ್ಗೆ ಏನು ಸಮಸ್ಯೆಯಿದೆ? ನೀವು ಸೋನಮ ಸರ್ ರವರನ್ನು ಇಲ್ಲಿಂದ ಅಪಹರಿಸಿ ಈ ಹೋರಾಟವನ್ನು ಇನ್ನಷ್ಟು ದೊಡ್ಡದು ಮಾಡಿದಿರಿ. ತದನಂತರ ಜುಲೈ ೨೦ ರಂದು ಹೆಣ್ಣುಮಕ್ಕಳ ತಲೆ ಒಡೆದಿರಿ, ಹೆಣ್ಣುಮಕ್ಕಳ ಬಟ್ಟೆ ಹರಿದು ಪೊಲೀಸರು ಅವರ ಮೇಲೆ ಹಲ್ಲೆ ಮಾಡಿದರು, ಆಗ ಈ ಹೋರಾಟ ಇಡೀ ದೇಶಕ್ಕೆ ಹರಡಿತು. ಈಗ ಸರಕಾರ ನಮ್ಮನ್ನು ಬಂಧಿಸಿ ಮೂರನೇ ತಪ್ಪು ಮಾಡಬಾರದು, ಇಲ್ಲದಿದ್ದರೆ ಈ ಹೋರಾಟ ಇನ್ನಷ್ಟು ಪ್ರಚಂಡವಾಗಲಿದೆ, ಎಂದು ಎಚ್ಚರಿಕೆ ನೀಡಿದರು.
ಬಂಧನವಾದರೂ ಶಾಂತಿಯುತ ಹೋರಾಟ ಮುಂದುವರಿಸಿ!
ದೀಪಕೆ ಮುಂದುವರಿದು, ಇಂದು ರಾತ್ರಿ ನಮ್ಮ ಗುಂಪನ್ನು ಬಂಧಿಸಿದರೆ, ಈ ಹೋರಾಟವನ್ನು ಮುಂದೆ ಶಾಂತಿಯುತ ರೀತಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮೆಲ್ಲರದ್ದಾಗಿದೆ ಎಂದು ನಾನು ಎಲ್ಲರಲ್ಲೂ ವಿನಂತಿಸುತ್ತೇನೆ. ನೀವೆಲ್ಲರೂ ಕಾನೂನು ಪಾಲಿಸುವ ದೇಶಭಕ್ತರು ಎಂದು ನಾನು ನಂಬಿದ್ದೇನೆ. ನಮ್ಮ ದೇಶಕ್ಕೆ ಹಾನಿಯಾಗುವಂತಹ ಯಾವುದೇ ಕೆಲಸವನ್ನು ನೀವು ಮಾಡುವುದಿಲ್ಲ. ಆದ್ದರಿಂದ ಇಂದು ನಮ್ಮನ್ನು ಬಂಧಿಸಿದರೆ, ನೀವು ದೇಶದ ಮೂಲೆ ಮೂಲೆಯಲ್ಲೂ ಈ ಹೋರಾಟವನ್ನು ಮುನ್ನಡೆಸಬೇಕಾಗಿದೆ. ಯಾರು ಹಿಂಸಾಚಾರ ಮಾಡುತ್ತಾರೋ ಅಥವಾ ತಪ್ಪಾದ ಕೆಲಸಗಳನ್ನು ಮಾಡುತ್ತಾರೋ, ಅವರು ಕಾಕ್ರೋಚ್ ಜನತಾ ಪಕ್ಷದ ಬೆಂಬಲಿಗರಾಗಿರಲು ಸಾಧ್ಯವಿಲ್ಲ. ನಾವು ಶಾಂತಿಯುತ ಮಾರ್ಗದಲ್ಲಿ ನಂಬಿಕೆ ಇಡುವ ಜನರು, ಎಂದರು.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ
ಸಿಲಿಗುರಿ ಕಾರಿಡಾರ್ ಈಗ ‘ಚಿಕನ್ ನೆಕ್’ ಆಗಿ ಉಳಿದಿಲ್ಲ, ಬದಲಿಗೆ ‘ಎಲಿಫೆಂಟ್ಸ್ ಟ್ರಂಕ್’ ಆಗಿದೆ!