ಜಂತರ್ ಮಂತರ್ ಪ್ರತಿಭಟನೆಯ ಕುರಿತು ಬಾಂಗ್ಲಾದೇಶ ಸರಕಾರದ ಅನಗತ್ಯ ಹೇಳಿಕೆ

ಢಾಕಾ (ಬಾಂಗ್ಲಾದೇಶ): “ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ಕೇಳಿದೆವು. ನಮ್ಮ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕು ಎಂಬುದು ಬಾಂಗ್ಲಾದೇಶ ಸರಕಾರದ ಆಶಯವಾಗಿದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ತನ್ನ ಜನರ ಸಮಸ್ಯೆಗಳನ್ನು ಆಲಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುತ್ತದೆ ಎಂದು ನಮ್ಮ ಸರಕಾರ ಆಶಿಸುತ್ತದೆ,” ಎಂದು ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಕಥಿತ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಉಬೈದ್ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ಪಾಕಿಸ್ತಾನ ಸರಕಾರ ತಪ್ಪಿಸಲು ಯತ್ನಿಸಿದೆ.
🤡 IRONICAL PREACHING FROM BANGLADESH! 🤡
"Hope India pays attention to its people's issues," says Bangladesh regarding the Jantar Mantar protests. Really? 🤦♂️
A country where democracy gets shredded every other day, and whose so-called "student protestors" unleashed horrific… pic.twitter.com/CM5Ff25J3d
— Sanatan Prabhat (@SanatanPrabhat) July 24, 2026
ಬಾಂಗ್ಲಾದೇಶದ ಹಲವಾರು ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹೊರತುಪಡಿಸಿ, ಶ್ರೀಲಂಕಾ ಮತ್ತು ನೇಪಾಳ ದೇಶಗಳ ಮಾಧ್ಯಮಗಳೂ ಕೂಡ ಭಾರತದ ಯುವಕರ ನೇತೃತ್ವದ ಈ ಪ್ರತಿಭಟನೆಗೆ ಪ್ರಮುಖ ಪ್ರಚಾರ ನೀಡಿವೆ.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ನ್ಯೂಯಾರ್ಕ್ (ಅಮೇರಿಕ): ಏಷ್ಯನ್ ಮೂಲದ ವ್ಯಕ್ತಿಗಳ ಮೇಲೆ ಚಾಕು ದಾಳಿ!
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India