
‘ನಿಮಗೆ ಯಾರಾದರೂ, ‘ನಿಮ್ಮ ಎರಡೂ ಕೈಗಳನ್ನು ಕತ್ತರಿಸಿ ಕೊಡಿ. ನಿಮಗೆ ೨ ಕೋಟಿ ರೂಪಾಯಿಗಳನ್ನು ಕೊಡುತ್ತೇನೆ’, ಎಂದು ಹೇಳಿದರೆ, ನೀವು ಹಾಗೆ ಮಾಡುತ್ತೀರಾ ? ಇನ್ಯಾರಾದರು, ‘ನಿಮ್ಮ ಎರಡೂ ಕಾಲುಗಳನ್ನು ಕತ್ತರಿಸಿ ಕೊಡಿ. ನಿಮಗೆ ಇನ್ನೂ ೨ ಕೋಟಿ ರೂಪಾಯಿಗಳನ್ನು ಕೊಡುತ್ತೇನೆ’, ಎಂದು ಹೇಳಿದರೆ ನೀವು ಕೊಡುತ್ತೀರಾ ? ಎರಡೇ ಏಕೆ, ‘೧೦ ಕೋಟಿ ರೂಪಾಯಿಗಳನ್ನು ಕೊಡುತ್ತೇನೆ’, ಎಂದು ಹೇಳಿದರೂ, ನೀವು ಹಾಗೆ ಮಾಡುವುದಿಲ್ಲ. ನಮ್ಮ ದೇಹಕ್ಕೆ ಹಣದಿಂದ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಷ್ಟೊಂದು ಅಮೂಲ್ಯ ದೇಹವನ್ನು ದೇವರು ನಮಗೆ ಉಚಿತವಾಗಿ ನೀಡಿದ್ದಾನೆ, ಈ ಕುರಿತು ಸತತವಾಗಿ ಮನದಲ್ಲಿ ಕೃತಜ್ಞತೆಯನ್ನಿಟ್ಟು ನಾವು ದೇಹವನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು.
ಮುಂದಿನ ಪ್ರಯತ್ನಗಳನ್ನು ನಿಯಮಿತವಾಗಿ ಮಾಡಬೇಕು –
೧. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು.
೨. ಪ್ರತಿದಿನ ಬೆಳಗ್ಗೆ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮವನ್ನು ಮಾಡಬೇಕು.
೩. ಚೆನ್ನಾಗಿ ಹಸಿವಾದಾಗಲೇ ಆಹಾರವನ್ನು ಸೇವಿಸಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧.೨೦೨೩)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!