ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಗುಜರಾತಿನ ಮಹಿಳಾ ವೈದ್ಯೆ !

ಸನಾತನ ಧರ್ಮವನ್ನು ಸ್ವೀಕರಿಸಿದ ಗುಜರಾತಿನ ಮಹಿಳಾ ವೈದ್ಯೆ

ಗಾಝಿಯಾಬಾದ (ಉತ್ತರಪ್ರದೇಶ) – ಅಮೇರಿಕಾದ ನಿವಾಸಿ ಓರ್ವ ಅನಿವಾಸಿ ಭಾರತೀಯ ಮಹಿಳಾ ವೈದ್ಯೆ ಇಸ್ಲಾಂ ಧರ್ಮವನ್ನು ಬಿಟ್ಟು ಸನಾತನ ಧರ್ಮವನ್ನು ಸ್ವೀಕರಿಸಿದರು. ಈ ಮಹಿಳೆಯು ಉತ್ತರಪ್ರದೇಶದ ಡಾಸನಾದಲ್ಲಿರುವ ಶಿವಶಕ್ತಿ ಧಾಮ ದೇವಸ್ಥಾನಕ್ಕೆ ಸುಮಾರು 12 ಲಕ್ಷ ರೂಪಾಯಿ ಬೆಲೆಬಾಳುವ 19 ತೊಲೆಯ ಬಂಗಾರದ ಕಿರೀಟವನ್ನು ಭಗವಾನ ಶಿವನಿಗೆ ಅರ್ಪಿಸಿದಳು. ಇದರೊಂದಿಗೆ ಅವಳು ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಮತ್ತು ಇತರೆ ಅಲಂಕಾರಗಳ ಸಾಮಗ್ರಿಗಳನ್ನು ಅರ್ಪಿಸಿದಳು.

ಭಗವಾನ ಶಿವನಿಗೆ ಚಿನ್ನದ ಕಿರೀಟ ಮತ್ತು ಅಲಂಕಾರಗಳ ಸಾಮಗ್ರಿಗಳನ್ನು ಮಹಿಳಾ ವೈದ್ಯೆ ಅರ್ಪಿಸಿದ್ದಾರೆ.

ಈ ವಿಷಯದಲ್ಲಿ ದೊರೆತ ಮಾಹಿತಿಯನುಸಾರ ಈ ಮಹಿಳಾ ವೈದ್ಯೆ ಭಗವಾನ ಮಹಾದೇವನನ್ನು ಗುರು ಮತ್ತು ಮಹಾಕಾಳಿದೇವಿಯನ್ನು ಮಾತೆಯೆಂದು ಸ್ವೀಕರಿಸಿದ್ದಾಳೆ. ಶಿವಶಕ್ತಿ ಧಾಮ ಡಾಸನಾ ದೇವಸ್ಥಾನದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಸರಸ್ವತಿಯವರು ಮಾತನಾಡುತ್ತಾ, ಈ ಮಹಿಳೆಯು ಇಸ್ಲಾಂ ಧರ್ಮವನ್ನು ತ್ಯಜಿಸಿದ ಬಳಿಕ ಸನಾತನ ಧರ್ಮವನ್ನು ಸ್ವೀಕರಿಸಿದಳು ಮತ್ತು ಇಲ್ಲಿ ರುದ್ರಾಭಿಷೇಕವನ್ನು ಮಾಡಿ ಭಗವಾನ ಭೋಲೆನಾಥನ ಆಶೀರ್ವಾದವನ್ನು ಪಡೆದುಕೊಂಡಳು ಎಂದು ಹೇಳಿದರು.

ಸಂಪಾದಕರ ನಿಲುವು

* ಲವ್ ಜಿಹಾದ್ ಗೆ ಬಲಿಯಾಗಿ ಸುಳ್ಳು ಪ್ರೀತಿಗಾಗಿ ಹಿಂದೂ ಧರ್ಮವನ್ನು ತ್ಯಜಿಸಲು ಹೊರಟಿರುವ ಹಿಂದೂ ಯುವತಿಯರು ಇದರಿಂದ ಪಾಠ ಕಲಿಯುವರೇ?