ಎನ್ . ಐ. ಎ. ನ ಆರೋಪಪತ್ರದಲ್ಲಿನ ಮಾಹಿತಿ !

ನವದೆಹಲಿ – ಪಾಕಿಸ್ತಾನದಲ್ಲಿ ಅಶಾಂತಿ ಇರುವುದರಿಂದ ಭಾರತೀಯ ಸೈನ್ಯವು ಉತ್ತರ ಭಾರತದಲ್ಲಿ ವ್ಯಸ್ತವಾಗಿರುವುದು. ಆಗ ಪಾಪ್ಯುಲರ್ ಫ್ರ್ಯಾಂಟ್ ಆಫ್ ಇಂಡಿಯಾದ (ಪಿ.ಎಫ್.ಐ) ಪ್ರಶಿಕ್ಷಿತ ಕಾರ್ಯಕರ್ತರು ದಕ್ಷಿಣ ಭಾರತವನ್ನು ಕಬಳಿಸಿ ಉತ್ತರ ಭಾರತದ ಕಡೆಗೆ ಮುನ್ನಡೆಯಬಹುದು, ಎಂಬ ಷಡ್ಯಂತ್ರವನ್ನು ಪಿ.ಎಫ್.ಐ ರಚಿಸಿತ್ತು. ಈ ಮಾಹಿತಿಯು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.)ವು ಪಿ.ಎಫ್.ಐ. ನ ೫ ಕಾರ್ಯಕರ್ತರ ವಿರುದ್ಧ ನ್ಯಾಯಾಲಯದಲ್ಲಿ ದಾಖಲಿಸಿದ್ದ ಆರೋಪಪತ್ರದಲ್ಲಿದೆ. ಈ ಕಾರ್ಯಕರ್ತರಿಂದ ವಶಪಡಿಸಿಕೊಂಡ ಕಾಗದಪತ್ರಗಳಿಂದ ೨೦೪೭ರ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿಸುವ ಸಂಚು ಬಯಲಾಗಿತ್ತು. ಪಿ.ಎಫ್.ಐ. ನ ಕಾರ್ಯಕರ್ತರಿಗೆ ಶಸ್ತ್ರಗಳನ್ನು ಚಲಾಯಿಯಿಸುವ ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ದೊರೆಯುತ್ತಲೇ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಲಾಯಿತು.
ಈ ಅರೋಪಪತ್ರದಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ. ತನಿಖೆಯಲ್ಲಿ ಪಿ.ಎಫ್.ಐಯು ಸಶಸ್ತ್ರ ವಿದ್ರೋಹ ಮಾಡಿ ಸರಕಾರವನ್ನು ಕೆಳಗಿಳಿಸಿ ಇಲ್ಲಿ ಇಸ್ಲಾಮಿ ರಾಷ್ಟ್ರ ಸ್ಥಾಪನೆಯ ರಣನೀತಿಯನ್ನು ಸಿದ್ಧಪಡಿಸಿತ್ತು. ಇದರಲ್ಲಿ ಗುಪ್ತವಾಗಿ ಸದಸ್ಯರ ಭರ್ತಿ ಮಾಡಿಸಿ ಅವರ ಸೈನ್ಯ ರಚಿಸಿ ಅವರಿಗೆ ಶಸ್ತ್ರ ಚಲಾಯಿಸುವ ತರಬೇತಿ ನೀಡಲಾಗುತ್ತಿತ್ತು. ಈ ರಣನೀತಿಯ ಅನುಸಾರ ಹಿಂದೂ ಸಂಘಟನೆಗಳು ಹಾಗೂ ಪಿ.ಎಫ್.ಐ ನ್ನು ವಿರೋಧಿಸುವವರ ಸೂಚಿಯನ್ನು ತಯಾರಿಸಿ ಅವರನ್ನು ಗುರಿಯಾಗಿಸಲಾಗುತ್ತಿತ್ತು.
(ಸೌಜನ್ಯ : TIMES NOW)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !