ಖಲಿನ್ತಾನಿ ಅಮೃತಪಾಲ ಸಿಂಗ್ ಆತ್ಮಾಹುತಿ ದಾಳಿಗಾಗಿ ಯುವಕರಿಗೆ ಸಿದ್ಧಪಡಿಸುತ್ತಿದ್ದ ! – ಗುಪ್ತಚರವರ ವರದಿ

  • ವ್ಯಸನಮುಕ್ತಗೊಳಿಸುವ ಹೆಸರಿನಲ್ಲಿ ಸಿಖ್ ಯುವಕರ ಬುದ್ಧಿಭ್ರಮೆ ಮಾಡುತ್ತಿದ್ದ !

  • ಐ.ಎಸ್.ಐ. ನ ಸಹಾಯದಿಂದ ಸಶ್ತ್ರ ಸಜ್ಜಿತ ದಳದ ರಚನೆ

ಚಂಡಿಗಡ – ‘ವಾರಿಸ ಪಂಜಾಬ ದೆ ಸಂಘಟನೇಯ ಮುಖಂಡ ಖಲಿಸ್ತಾನಿ ಅಮೃತಪಾಲ ಸಿಂಗ್ ನ ಬಗ್ಗೆ ಗುಪ್ತಚರ ವ್ಯವಸ್ಥೆಯು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ. ಅಮೃತಪಾಲ ಸಿಂಗ್ ಆತ್ಮಾಹುತಿದಾಳಿಗಾಗಿ ಯುಕರಿಗೆ ಸಿದ್ಧಪಡಿಸುತ್ತಿದ್ದ. ಅದಕ್ಕಾಗಿ ಅವನು ಧಾರ್ಮಿಕ ಸ್ಥಳ ಮತ್ತು ವ್ಯಸನಮುಕ್ತಗೊಳಿಸುವ ಕೇಂದ್ರಗಳನ್ನು ಉಪಯೋಗಿಸುತ್ತಿದ್ದ.

ಅಮೃತಪಾಲ ಸಿಂಗ್ ಪಾಕಿಸ್ತಾನದ ‘ಐ.ಎಸ್.ಐ.ಯು ಹೇಳಿದಕ್ಕಾಗಿ ಕಳೆದ ವರ್ಷ ದುಬೈನಿಂದ ಭಾರತಕ್ಕೆ ಬಂದಿದ್ದನು. ಈತನಿಗೆ ವಿದೇಶದಲ್ಲಿ ನೆಲೆಸಿರುವ ಖಲಿಸ್ತಾನಿಯರ ಬೆಂಬಲವು ಬೆಂಬಲವಿತ್ತು, ಎಂದು ಗುಪ್ತಚರ ವ್ಯವಸ್ಥೆ ಹೇಳಿಕೊಂಡಿದೆ. ಇಲ್ಲಿ ಬಂದ ನಂತರ ಆತ ಯುವಕರನ್ನು ’ಮಾನವಿ ಬಾಂಬ್’ಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿದ್ದ. ಆತ ಯುವಕರ ಬುದ್ಧಿಭ್ರಮೆ ಮಾಡುತ್ತಿದ್ದ. ಅಮೃತಪಾಲ್ ‘ಐ.ಎಸ್.ಐ’ ನ ಸಹಾಯದಿಂದ ‘ಆನಂದಪುರ ಖಾಲಸಾ ಪಡೆ’ ವನ್ನು ಸಿದ್ಧ ಪಡಿಸುತ್ತಿದ್ದನು. ಹತ್ಯೆಗೀಡಾದ ಭಯೋತ್ಪಾದಕ ದಿಲಾವರ್ ಸಿಂಗ್‌ನ ಆಲೋಚನೆಗಳನ್ನು ಅನುಸರಿಸಲು ಯುವಕರನ್ನು ಪ್ರಚೋದಿಸುತ್ತಿದ್ದ. ದಿಲಾವರ್ ಸಿಂಗ್‌ನು ’ಮಾನವಿ ಬಾಂಬ್’ ಎಂದು ಕೆಲಸ ಮಾಡಿದ್ದನು.

ಸಂಪಾದಕೀಯ ನಿಲುವು

ಹೀಗಿದ್ದರೆ, ಮೊದಲೇ ಗುಪ್ತಚರರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರೇ ? ಮತ್ತು ಪೋಲಿಸರು ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ? ಪೋಲಿಸರು ಏಕೆ ಅಮೃತಪಾಲ ಪರಾರಿಯಾಗುವ ಮುನ್ನವೆ ಅವನನ್ನು ಕಟ್ಟಿಹಾಕಲಿಲ್ಲ ? ಈ ಪ್ರಶ್ನೆಗಳ ಉತ್ತರ ಜನರಿಗೆ ಕೊಡಲೆಬೇಕು !