ಸಂಸತ್ತಿನಲ್ಲಿ ನಡೆದ ರಂಪಾರಾಧಾಂತದಿಂದ ಕಾರ್ಯಕಲಾಪ ಮಧ್ಯಾಹ್ನದವರೆಗೆ ಸ್ಥಗಿತ !

ನವ ದೆಹಲಿ – ರಾಹುಲ್ ಗಾಂಧಿ ಲಂಡನದಲ್ಲಿ ಪ್ರಜಾಪ್ರಭುತ್ವಕ್ಕೆ ಅವಮಾನ ಆಗುವ ಹೇಳಿಕೆ ನೀಡಿದ ಪ್ರಕರಣದಲ್ಲಿ ಕ್ಷಮೆ ಯಾಚಿಸಬೇಕೆಂದು, ಆಡಳಿತಾರೂಢ ಪಕ್ಷದ ಸಂಸದರಿಂದ ಲೋಕಸಭೆಯಲ್ಲಿ ಆಗ್ರಹಿಸಿದ್ದರಿಂದ ವಿರೋಧ ಪಕ್ಷದಿಂದ ವಿರೋಧ ಮಾಡಲಾಯಿತು. ಇದರಿಂದ ನಡೆದಿರುವ ರಂಪಾಟದಿಂದ ಲೋಕಸಭೆಯ ಕಾರ್ಯಕಲಾಪ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಯಿತು. ರಾಜ್ಯಸಭೆಯಲ್ಲಿ ಕೂಡ ರಂಪಾಟ ನಡೆದಿರುವುದರಿಂದ ಅದನ್ನು ಕೂಡ ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಲಾಯಿತು.