ಶ್ರೀಕೃಷ್ಣ ಜನ್ಮಭೂಮಿಯ ಎಲ್ಲ ಮೊಕದ್ದಮೆಗಳನ್ನು ಅಲಹಾಬಾದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆಗ್ರಹ

ಮುಂದಿನ 10 ದಿನಗಳಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸುವಂತೆ ಆದೇಶ

ಪ್ರಯಾಗರಾಜ (ಉತ್ತರಪ್ರದೇಶ) – ಶ್ರೀಕೃಷ್ಣಜನ್ಮಭೂಮಿಯ ಪ್ರಕರಣದಲ್ಲಿ ಎಲ್ಲ ಮೊಕದ್ದಮೆಗಳ ಆಲಿಕೆಯನ್ನು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ನಡೆಸುವಂತೆ ಕೋರಿರುವ ಅರ್ಜಿಯ ಕುರಿತು ಎಲ್ಲ ಅರ್ಜಿದಾರರಿಗೆ ಮುಂದಿನ 10 ದಿನಗಳಲ್ಲಿ ಪ್ರತಿಜ್ಞಾ ಪತ್ರವನ್ನು ಸಲ್ಲಿಸುವಂತೆ ಉಚ್ಚ ನ್ಯಾಯಾಲಯ ಆದೇಶಿಸಿದೆ. ಈ ಬಗ್ಗೆ ಮುಂದಿನ ವಿಚಾರಣೆ ಎಪ್ರಿಲ್ 4 ರಂದು ನಡೆಯಲಿದೆ. ಈ ಪ್ರಕರಣದಲ್ಲಿ ಒಟ್ಟು 8 ಅರ್ಜಿಗಳು ದಾಖಲಾಗಿವೆ.