
ಇಂದೂರ – ಪಾಕಿಸ್ತಾನದ ಮೂಲತಾನನಿಂದ ಹರಿದ್ವಾರಕ್ಕೆ ತನ್ನ ಪೂರ್ವಜರ ಅಸ್ತಿ ವಿಸರ್ಜನೆ ಮಾಡುವುದಕ್ಕಾಗಿ ಬಂದಿರುವ ಎರಡು ಹಿಂದೂ ಕುಟುಂಬದ ೨೨ ಸದಸ್ಯರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದಾರೆ. ಈ ಎಲ್ಲ ನಿರಾಶ್ರಿತರಿಗೆ ಮಧ್ಯಪ್ರದೇಶದಲ್ಲಿನ ಧಾರ ಜಿಲ್ಲೆಯಲ್ಲಿ ವಾಸಿಸಲು ಸ್ಥಳ ನೀಡಿದ್ದಾರೆ.
೨೨ ಹಿಂದೂ ನಿರಾಶ್ರಿತರ ಗುಂಪು ತಾತ್ಕಾಲಿಕ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ. ಅವರು ಇಂದೂರಿನ ಶಾಸಕ ಶಂಕರ ಲಾಲವಾನಿ ಇವರನ್ನು ಸಂಪರ್ಕಿಸಿ ಪಾಕಿಸ್ತಾನದಲ್ಲಿನ ಕಿರುಕುಳದ ಬಗ್ಗೆ ಹೇಳಿ ಭಾರತದಲ್ಲಿ ವಾಸಿಸುವ ಇಚ್ಛೆ ವ್ಯಕ್ತಪಡಿಸಿದರು. ಶಾಸಕರು ಗೃಹ ಸಚಿವಾಲಯದ ಜೊತೆ ಚರ್ಚೆ ನಡೆಸಿ ಹಿಂದೂ ನಿರಾಶ್ರಿತರಿಗೆ ಭಾರತದಲ್ಲಿ ವಾಸಿಸಲು ಅನುಮತಿ ಪಡೆಯುವಲ್ಲಿ ಸಹಾಯ ಮಾಡಿದರು. ಶಾಸಕ ಲಾಲವಾನಿ ಇವರು, ಎಲ್ಲರಿಗೂ ತಾತ್ಕಾಲಿಕವಾಗಿ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದೇವೆ. ಮುಂದೆ ಅವರು ಸುದೀರ್ಘದ ವಿಸಾಗಾಗಿ ಅರ್ಜಿ ಸಲ್ಲಿಸುವರು, ಅದರ ನಂತರ ಅವರು ಭಾರತದಲ್ಲಿ ವಾಸಿಸಬಹುದು. ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಅಲ್ಲಿ ಹಿಂದೂಗಳ ಮೇಲೆ ಅನೇಕ ರೀತಿಯ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿದರು.
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!