
ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು
ಬಿಲಾಸಪುರ (ಛತ್ತೀಸಗಡ) – ಇಲ್ಲಿಯ ಸಿಪಟ ವೃತ್ತದಲ್ಲಿ ಓರ್ವ ಅಪ್ರಾಪ್ತ ಹುಡುಗನು ನೇತಾಜಿ ಸುಭಾಷಚಂದ್ರ ಬೋಸರ ಪುತ್ತಳಿಗೆ ಅಪಮಾನ ಮಾಡಿದ್ದಾನೆ. ಪೊಲೀಸರು ಹುಡುಗನನ್ನು ಬಂಧಿಸಿದ್ದಾರೆ. ಅವನು ಯಾವ ಪುತ್ತಳಿಗೆ ಅಪಮಾನ ಮಾಡಿದನೋ ಆ ಪುತ್ತಳಿಯ ಕಾಲಿಗೆ ನಮಸ್ಕರಿಸುವಂತೆ ಅನಿವಾರ್ಯಪಡಿಸಲಾಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಇದರಲ್ಲಿ ಒಬ್ಬ ಅಪ್ರಾಪ್ತ ಹುಡುಗನು ಪುತ್ತಳಿಯ ಹತ್ತಿರ ಹೋಗಿ ಸಿಗರೇಟ್ ಸೇದುತ್ತಾ ಸುಭಾಷಚಂದ್ರ ಬೋಸರ ಪುತ್ತಳಿಯ ಮುಖದ ಮೇಲೆ ಹೊಗೆಯನ್ನು ಬಿಡುತ್ತಿರುವಂತೆ ಅವರ ಬಾಯಿಗೆ ಸಿಗರೇಟ ಹಿಡಿದಿರುವುದು ಕಾಣಿಸುತ್ತಿದೆ. ಹುಡುಗನನ್ನು ಬಂಧಿಸಿದ ಬಳಿಕ ಮತ್ತೊಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಆ ಹುಡುಗನು ಪುತ್ತಳಿಯ ಸ್ವಚ್ಛತೆಯನ್ನು ಮಾಡುತ್ತಿರುವುದು ಮತ್ತು ಪುತ್ತಳಿಯ ಕಾಲಿಗೆ ನಮಸ್ಕರಿಸುತ್ತಿರುವುದು ಕಾಣಿಸುತ್ತಿದೆ.
Chhattisgarh: Minor boy held for desecrating #Netaji Subhash Chandra Bose’s statue in Bilaspur https://t.co/8klSBb6sYB
— Organiser Weekly (@eOrganiser) March 11, 2023
ಸಂಪಾದಕರ ನಿಲುವು* ಎಲ್ಲ ಪಕ್ಷಗಳ ರಾಜ್ಯಕರ್ತರು ಜನರಿಗೆ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಪುರುಷರ ವಿಷಯದಲ್ಲಿ ಗೌರವವನ್ನು ಕಲಿಸದಿರುವುದರ ಪರಿಣಾಮವೇ ಇದಾಗಿದೆ ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ