ರಾಯಪುರದಲ್ಲಿ (ಛತ್ತೀಸಗಢ) ದೇವತೆಗಳ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಹರಿದು ಹಾಕಿದ ಮುಸಲ್ಮಾನರ ಬಂಧನ

ರಾಯಪುರ (ಛತ್ತೀಸಗಢ) – ಗುಢಿಯಾರಿ ಪ್ರದೇಶದ ರಾಮನಗರ ಪ್ರದೇಶದಲ್ಲಿ ದೇವತೆಗಳ ಭಿತ್ತಿಚಿತ್ರಗಳನ್ನು ಹರಿದು ಹಾಕಿದ್ದರಿಂದ ಸಾವಿರಾರು ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ನಂತರ, ಪೊಲೀಸರು ಈ ಪ್ರಕರಣದಲ್ಲಿ ಸಮೀರ್ ಮತ್ತು ಶಾಹಿದ್ ಸೇರಿದಂತೆ ೭ ಜನರನ್ನು ಬಂಧಿಸಿದ್ದಾರೆ. ಅವರಲ್ಲಿ ೫ ಮಂದಿ ಅಪ್ರಾಪ್ತರಾಗಿದ್ದಾರೆ. ಈ ಭಿತ್ತಿಪತ್ರಗಳನ್ನು ಕೆಲವರು ಹರಿದು ಹೋಳಿಯಲ್ಲಿ ಎಸೆದಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ, ಜನರು ಪ್ರತಿಭಟನೆಯನ್ನು ಪ್ರಾರಂಭಿಸಿದರು.

ಸಂಪಾದಕರ ನಿಲುವು

* ಛತ್ತೀಸಗಢದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮತಾಂಧರ ಹಾವಳಿ ಹೆಚ್ಚಾಗಿದೆ. ಹಿಂದೂಗಳು ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವುದು ಯೋಗ್ಯ !

* ಇದು ಜಾತ್ಯತೀತವಾದಿಗಳು ಹಿಂದೂಗಳಿಗೆ ಮಾತ್ರ ಸರ್ವಧರ್ಮಸಮಭಾವದ ಉಪದೇಶ ನೀಡಿದ ಪರಿಣಾಮವಾಗಿದೆ ಎಂಬುದನ್ನು ಗಮನದಲ್ಲಿಡಿ !