ಕರ್ನಾಟಕದಲ್ಲಿನ ಭಾಜಪದ ಸಂಸದರಾದ ಎಮ್‌. ಮುನಿಸ್ವಾಮಿಯವರು ಗಂಡ ಬದುಕಿರುವಾಗಲೂ ಟಿಕಲಿ ಹಚ್ಚದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು (ಕರ್ನಾಟಕ) – ಕರ್ನಾಟಕದ ಕೋಲಾರ ಮತಗಟ್ಟೆಯ ಭಾಜಪದ ಸಂಸದರಾದ ಎಮ್‌. ಮುನಿಸ್ವಾಮಿಯವರು ಚನ್ನಯಿಹಾ ದೇವಸ್ಥಾನದ ಒಂದು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಒಂದು ಮಾರಾಟ ಕೇಂದ್ರದಲ್ಲಿ ಬಟ್ಟೆ ಮಾರುವ ಮಹಿಳೆಗೆ ಗಂಡನು ಬದುಕಿರುವಾಗಲೂ ಟಿಕಲಿಯನ್ನು ಹಚ್ಚದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮುನಿಸ್ವಾಮಿಯವರು ಆ ಮಹಿಳಿಗೆ ‘ಮೊದಲು ಹಣೆಗೆ ಟಿಕಲಿ ಹಚ್ಚು. ನಿನ್ನ ಗಂಡ ಬದುಕಿದ್ದಾನಲ್ಲವೇ ? ನಿನಗೆ ‘ಕಾಮನ ಸೆನ್ಸ್‌’ (ಸಾಮಾನ್ಯ ಜ್ಞಾನ) ಇಲ್ಲವೇ ?’ ಎಂದು ಹೇಳಿ ಆ ಮಹಿಳೆಗೆ ಟಿಕಲಿ ನೀಡುವಂತೆ ತಮ್ಮ ಸಹಕಾರಿಗೆ ತಿಳಿಸಿದರು. ಈ ಘಟನೆಯ ವಿಡಿಯೋ ಸಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ವಾದ ನಿರ್ಮಾಣವಾಯಿತು. ಕಾಂಗ್ರೆಸ್‌ ಈ ಘಟನೆಯನ್ನು ನಿಷೇಧಿಸಿದೆ. ‘ಇಂತಹ ಘಟನೆಗಳಿಂದ ಭಾಜಪದ ಸಂಸ್ಕೃತಿ ಕಂಡು ಬರುತ್ತದೆ’ ಎಂದೂ ಟೀಕಿಸಿದೆ. (ಯಾರಾದರೂ ಕಾಂಗ್ರೆಸ್ಸಿನ ಈ ಟೀಕೆಯಿಂದ ಅವರ ವಿಕೃತಿ ಕಂಡುಬರುತ್ತದೆ, ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ ! – ಸಂಪಾದಕರು)

ಕಾಂಗ್ರೆಸ್ಸಿನಿಂದ ಟೀಕೆ !

ಸಂಪಾದಕೀಯ ನಿಲುವು

  • ಹಿಂದೂ ಧರ್ಮದ ಅನುಸಾರ ಸೌಭಾಗ್ಯವತಿ ಮಹಿಳೆಯು ಹಣೆಯ ಮೇಲೆ ಕುಂಕುಮ ಹಚ್ಚುವುದು ಯೋಗ್ಯವಾಗಿದೆ. ಇದರಿಂದ ಮಹಿಳೆಗೆ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತದೆ. ಹಿಂದೂ ಮಹಿಳೆಯರಿಗೆ ಧರ್ಮಶಿಕ್ಷಣವಿಲ್ಲ, ಆದುದರಿಂದಲೇ ಅವರು ಇವುಗಳನ್ನು ಪಾಲಿಸುವುದಿಲ್ಲ !
  • ಕುಂಕುಮ ಅಥವಾ ಟಿಕಲಿಯನ್ನು ಹಚ್ಚದ ವಿವಾಹಿತ ಮಹಿಳೆಗೆ ಅದನ್ನು ಹಚ್ಚುವ ಬಗ್ಗೆ ಯಾರಾದರೂ ಹೇಳಿದರೆ, ಅದರಲ್ಲಿ ತಪ್ಪೇನು ? ಹಿಂದೂಗಳಿಗೆ ಯಾರಾದರೂ ಧರ್ಮಪಾಲನೆ ಮಾಡಲು ಹೇಳಿದರೆ ಕಾಂಗ್ರೆಸ್‌ ಹಾಗೂ ಇತರ ಢೋಂಗಿ ಪುರೋ(ಅಧೋ)ಗಾಮಿಗಳು ವಿರೋಧಿಸುತ್ತಾರೆ; ಆದರೆ ಇದೇ ಜನರು ಕರ್ನಾಟಕದಲ್ಲಿನ ಶಾಲೆಗಳಲ್ಲಿ ಹಿಜಾಬಿನ ಮೇಲೆ ನಿರ್ಬಂಧ ಹೇರುವುದನ್ನು ವಿರೋಧಿಸುತ್ತಾರೆ ! ಇದರಿಂದ ಅವರ ಢೋಂಗಿತನ ಬಹಿರಂಗವಾಗುತ್ತದೆ !