ಭಾರತವೇ ಜಗತ್ತಿನ ನಿಜವಾದ ಮುಖಂಡ ! – ತಾಲಿಬಾನ

ಅಫಘಾನಿಸ್ತಾನಕ್ಕೆ ಸಹಾಯ ಮಾಡುವ ಭಾರತಕ್ಕೆ ತಾಲಿಬಾನಿಯಿಂದ ಶ್ಲಾಘನೆ !

ಸುಹೇಲ ಶಾಹೀನ

ಕಾಬುಲ (ಅಫಘಾನಿಸ್ತಾನ) – ಭಾರತವೇ ಜಗತ್ತಿನ ನಿಜವಾದ ಮುಖಂಡವಾಗಿದೆಯೆಂದು ತಾಲಿಬಾನ ವಕ್ತಾರ ಸುಹೇಲ ಶಾಹೀನರು ಗೌರವೋದ್ಗಾರ ತೆಗೆದಿದ್ದಾರೆ. ಭಾರತ ಹಸಿದ ಅಪಘಾನಿಸ್ತಾನದ ಜನರಿಗಾಗಿ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಅಫಘಾನಿಸ್ತಾನಕ್ಕೆ ಉಚಿತವಾಗಿ ಕಳುಹಿಸುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆತ ಮಾತನಾಡುತ್ತಿದ್ದ, ಶಾಹೀನ ಮಾತು ಮುಂದುವರಿಸಿ, ಭಾರತದ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಈ ಸಹಾಯದಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಾಢವಾಗಲಿದೆ ಎಂದು ಹೇಳಿದ್ದಾನೆ.

ಸಂಪಾದಕರ ನಿಲುವು

ಭಾರತವು ಮಾನವಿಯತೆಯ ದೃಷ್ಟಿಯಿಂದ ಅಫಘಾನಿಸ್ತಾನಕ್ಕೆ ಸಹಾಯ ಮಾಡಿದ್ದರೂ, `ಇಸ್ಲಾಮಿ ಸರಕಾರಗಳಿಗೆ ಇಂತಹ ಸಹಾಯದ ಕಿಂಚಿತ್ತೂ ಬೆಲೆಯಿರುವುದಿಲ್ಲ ಮತ್ತು ಹೀಗೆ ಸಹಾಯ ಮಾಡುವವರ ಮೇಲೆ ಅವರು ಪ್ರಸಂಗ ಬಂದಾಗ ಆಕ್ರಮಣ ನಡೆಸಲೂ ಹಿಂದೆ-ಮುಂದೆ ನೋಡುವುದಿಲ್ಲ’, ಇದೇ ಇತಿಹಾಸ ಹೇಳುತ್ತದೆ, ಎನ್ನುವುದನ್ನು ಸರಕಾರ ಗಮನಬಲ್ಲಿಟ್ಟುಕೊಳ್ಳಬೇಕು !