ಭಾರತವು ಪಾಕಿಸ್ತಾನಕ್ಕೆ ಗೋಧಿ ಕಳುಹಿಸಿ ನೆರೆಹೊರೆಯ ಧರ್ಮವನ್ನು ಪಾಲಿಸಬೇಕು !

ಕೇಂದ್ರ ಸರಕಾರಕ್ಕೆ ರಾಷ್ಟ್ರೀಯ ಸ್ವಯಂ ಸಂಘದ ಸಹಕಾರ್ಯವಾಹಕ ಡಾ. ಕೃಷ್ಣ ಗೋಪಾಲರ ಸಲಹೆ

ಡಾ. ಕೃಷ್ಣ ಗೋಪಾಲ

ನವ ದೆಹಲಿ – ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಭಾರತವು 25-50 ಲಕ್ಷ ಟನ ಗೋಧಿಯನ್ನು ಕಳುಹಿಸಿ ನೆರೆಹೊರೆಯ ಧರ್ಮವನ್ನು ಪಾಲಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹಕ ಡಾ. ಕೃಷ್ಣ ಗೋಪಾಲರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು. ಚಲನಚಿತ್ರ ನಿರ್ಮಾಪಕ ಇಕ್ಬಾಲ ದುರ್ರಾನಿಯವರು ದೆಹಲಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಪ್ರಚಾರಕ ಇಂದ್ರೇಶ ಕುಮಾರ ಇವರೂ ಉಪಸ್ಥಿತರಿದ್ದರು.

ಡಾ. ಕೃಷ್ಣ ಗೋಪಾಲ ಮುಂದೆ ಮಾತನಾಡುತ್ತಾ,

1. ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು ಕೆಜಿಗೆ 250 ರೂಪಾಯಿ ಆಗಿದೆ. ಇದನ್ನು ಕೇಳಿ ದುಃಖವೆನಿಸುತ್ತದೆ. ನಾವು ಅವರಿಗೆ ಹಿಟ್ಟನ್ನು ಕಳುಹಿಸಲು ಸಾಧ್ಯವಿದೆ. ಪಾಕಿಸ್ತಾನ ಬೇಡುವುದಿಲ್ಲ; ಆದರೆ ಭಾರತ ಅವರಿಗೆ 25-50 ಲಕ್ಷ ಟನ್ ಗೋಧಿಯನ್ನು ಕೊಡಬಹುದು. 70 ವರ್ಷದ ಹಿಂದೆ ಅವರು ನಮ್ಮೊಂದಿಗೇ ಇದ್ದರು.

2. ಪಾಕಿಸ್ತಾನ ನಮ್ಮೊಂದಿಗೆ ಜಗಳವಾಡುತ್ತಲೇ ಇರುತ್ತದೆ. ಭಾರತದ ವಿರುದ್ಧ 4 ಯುದ್ಧಗಳಾಗಿವೆ. ದಾಳಿಯು ಯಾವಾಗಲೂ ಪಾಕಿಸ್ತಾನವೇ ಮಾಡುತ್ತದೆ. ಹಗಲು ರಾತ್ರಿ ನಮ್ಮ ಅಪಮಾನ ಮಾಡುತ್ತದೆ. ಆದರೂ ಅವರು ಸುಖವಾಗಿರಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ.

3. ಎರಡೂ ದೇಶಗಳ ನಡುವೆ ಇಷ್ಟು ಅಂತರದಿಂದ ಏನು ಲಾಭವಿದೆ ? ಅವರ ದೇಶದಲ್ಲಿ ಒಂದು ನಾಯಿಯೂ ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಇಚ್ಛೆಯಿದೆ. ನಾವು `ಸರ್ವೆ ಭವಂತು ಸುಖಿನಃ’ (ಎಲ್ಲರೂ ಸುಖವಾಗಿರಬೇಕು) ಎಂದು ನಂಬುವ ದೇಶವಾಗಿದೆ. ಪಾಕಿಸ್ತಾನ ನಮ್ಮ ಬಳಿ ಕೇಳುವುದಿಲ್ಲ; ಆದರೆ ಭಾರತವು ಪಾಕಿಸ್ತಾನಕ್ಕೆ ಗೋಧಿ ಕಳುಹಿಸಬೇಕು. ಭಾರತದ ಭೂಮಿಯ ಮೇಲೆ ಯಾವುದೇ ವ್ಯಕ್ತಿ, ಅವನು ಜೈನ, ಸೀಖ್ಕ, ವೈಷ್ಣವ, ಆರ್ಯನಿರಲಿ, `ಸರ್ವೇ ಭವಂತು ಸುಖಿನಃ’ ವಿಲ್ಲದೇ ಅಪೂರ್ಣವಾಗಿದೆ.