‘ಹಿಂದೂ ರಾಷ್ಟ್ರ’ ದವರು ಜುನೈದ ಮತ್ತು ನಾಸೀರನನ್ನು ಹತ್ಯೆ ಮಾಡಿದರು !’ (ಅಂತೆ) – ಅಸದುದ್ದೀನ ಓವೈಸಿಯವರ ಆರೋಪ

ಅಸದುದ್ದೀನ ಓವೈಸಿ

ಭಾಗ್ಯನಗರ – ಜುನೈದ ಮತ್ತು ನಾಸಿರ ಇವರಿಬ್ಬರನ್ನು ಹಿಂದೂ ರಾಷ್ಟ್ರ ನಿರ್ಮಿಸುವವರು ಹತ್ಯೆ ಮಾಡಿದ್ದಾರೆ. ಗೋರಕ್ಷಣೆಯ ಹೆಸರಿನಡಿಯಲ್ಲಿ ನಡೆಸುವ ಒಂದು ಸಂಘಟನೆಯ ಗುಂಪು ಇವರಿಬ್ಬರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ಹರಿಯಾಣದಲ್ಲಿರುವ ಭಾಜಪ ಸರಕಾರ ಜವಾಬ್ದಾರವಾಗಿದೆ; ಕಾರಣ ಸರಕಾರ ಈ ಗುಂಪಿಗೆ ರಕ್ಷಣೆ ನೀಡುತ್ತಿದೆ. ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಾಂಸದ ಅಸದುದ್ದೀನ ಒವೈಸಿಯವರು ಆರೋಪ ಮಾಡಿದ್ದಾರೆ. ಒವೈಸಿ ಮಾತು ಮುಂದುವರೆಸುತ್ತಾ, ಈ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏನಾದರೂ ಮಾತನಾಡುವರೇ ? ನೊಂದ ಕುಟುಂಬದವರಿಗೆ ನ್ಯಾಯ ಸಿಗುವುದಿಲ್ಲ ಎನ್ನುವುದು ನನಗೆ ಖಾತ್ರಿಯಿದೆ ಎಂದೂ ಅವರು ಹೇಳಿದ್ದಾರೆ. ಅವರು ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

  • ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡುವವರು ಕಾಶ್ಮೀರದಲ್ಲಿ ಏನು ಮಾಡಿದರು ? ಈ ವಿಷಯದಲ್ಲಿ ಓವೈಸಿ ಎಂದಿಗೂ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು !
  • ಹಿಂದೂ ರಾಷ್ಟ್ರ ನಿರ್ಮಿಸುವವರು ಹೀಗೆ ಮಾಡುತ್ತಿದ್ದರೆ, ಇಷ್ಟೊತ್ತಿಗೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು !