‘ಸೋಮನಾಥ ದೇವಸ್ಥಾನದಲ್ಲಿ ಅಯೋಗ್ಯ ಕೃತ್ಯಗಳು ನಡೆದಿತ್ತು. ಆದ್ದರಿಂದ ಗಝನಿ ಆಕ್ರಮಣ ನಡೆಸಿದ್ದನು !’

‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್ ರವರ ಆಕ್ಷೇಪಾರ್ಹ ಹೇಳಿಕೆ !

ವೆರಾವಳ (ಗುಜರಾತ) – 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಸೋಮನಾಥ ದೇವಸ್ಥಾನದ ವಿಷಯದಲ್ಲಿ ಅಪಮಾನಕಾರಕ ಹೇಳಿಕೆ ನೀಡಿರುವ ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್ ರವರ ವಿರುದ್ಧ ದೂರು ದಾಖಲಿಸಲಾಗಿದೆ. ಶ್ರೀ ಸೋಮನಾಥ ಟ್ರಸ್ಟ ಮಹಾವ್ಯವಸ್ಥಾಪಕ ವಿಜಯ ಸಿಂಹ ಚಾವಡಾ ಇವರು ದೂರು ನೀಡಿದ ಬಳಿಕ ಈ ಅಪರಾಧ ದಾಖಲಿಸಲಾಗಿದೆ.

ರಶೀದ್ ಏನು ಹೇಳಿದ್ದರು ?

ರಶೀದ್ ಇವರು ಜನೇವರಿ 9 ರಂದು ‘ಎ.ಎನ್.ಐ.’ ಈ ವಾರ್ತಾವಾಹಿನಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, ಇತಿಹಾಸದಲ್ಲಿ, ಜನರು ಮಹಮ್ಮದ ಗಝನಿಗೆ ಸೋಮನಾಥ ದೇವಸ್ಥಾನದಲ್ಲಿ ಶ್ರದ್ಧೆ ಮತ್ತು ದೇವರ ಹೆಸರಿನಲ್ಲಿ ಅಯೋಗ್ಯ ವಿಷಯಗಳು ನಡೆಯುತ್ತಿವೆ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಎಂದು ಹೇಳಿದ್ದರು. ಗಝನಿಗೆ ಈ ಮಾಹಿತಿ ದೊರೆತಾಗ, ಅವನಿಗೆ ಇದರಲ್ಲಿ ಸತ್ಯವಿದೆಯೆಂದು ಕಂಡು ಬಂದಿದ್ದರಿಂದ ಅವನು ದಾಳಿ ಮಾಡಿದನು. ಅವನು ದೇವಸ್ಥಾನವನ್ನು ಧ್ವಂಸಗೊಳಿಸಲಿಲ್ಲ, ಅವನು ಅಲ್ಲಿಯ ಅಯೋಗ್ಯ ಕೃತ್ಯವನ್ನು ನಿಲ್ಲಿಸಲು ಪ್ರಯತ್ನಿಸಿದನು ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಇಂತಹವರಿಗೆ ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆಯಾಗಬೇಕು !