ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ತಕರಾರು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾನ ನಾಗರಿಕ ಕಾಯಿದೆ ದಲಿತ ಮತ್ತು ಆದಿವಾಸಿಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಗುರುತಿಗೆ ಹಾನಿಯುಂಟಾಗುವುದು. ಭಾರತೀಯ ಸಂವಿಧಾನದಲ್ಲಿ ಎಲ್ಲಾ ಧರ್ಮದವರಿಗೆ ಅವರ ಧರ್ಮವನ್ನು ಪಾಲಿಸಲು ಸ್ವಾತಂತ್ರ್ಯ ನೀಡಿದೆ. ಸರಕಾರ ಸಾಮಾನ್ಯ ನಾಗರಿಕರ ಸ್ವಾತಂತ್ರ್ಯದ ಮೇಲೆ ಆಘಾತ ಮಾಡಬಾರದು. ಸಮಾನ ನಾಗರಿಕ ಕಾನೂನು ಸಂವಿಧಾನ ವಿರೋಧಿ ಆಗುವುದು, ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತನ್ನ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದೆ. ಬೋರ್ಡಿನ ಅಧ್ಯಕ್ಷರಾಗಿರುವ ಮೌಲಾನಾ ಸೈಯದ್ ರಾಬೇ ಹಸನಿ ನದವಿ ಇವರ ಮುಖಂಡತ್ವದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಎಂ.ಐ.ಎಂ. ನ ಅಧ್ಯಕ್ಷ ಮತ್ತು ಸಂಸದ ಅಸದ್ದೀನ್ ಓವೈಸಿ ಇವರು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ `ಧಾರ್ಮಿಕ ಪೂಜಾ ಸ್ಥಳದ ಕಾನೂನು ರದ್ದುಪಡಿಸಿದರೆ ಆಗ ದೇಶದಲ್ಲಿ ಅರಾಜಕತೆ ನಿರ್ಮಾಣವಾಗುವುದು’ ಎಂದು ಕೂಡ ಹೇಳಲಾಗಿದೆ.
AIMPLB passed a resolution at its executive meeting saying that the implementation of a #UniformCivilCode was not possible as it would be an ‘unnecessary’ Act#UCC #AIMPLBMeeting
— Organiser Weekly (@eOrganiser) February 6, 2023
ದೇಶದಲ್ಲಿ ದ್ವೇಷದ ವಿಷ ಪಸರಿಸುತ್ತಿದ್ದಾರೆ, ಮತ್ತು ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡುತ್ತಿದ್ದಾರೆ. ಇದು ಅಪಾಯಕಾರಿಯಾಗಿದೆ ಮತ್ತು ಇದರಿಂದ ದೇಶದಲ್ಲಿರುವ ಸಹೋದರತ್ವ ಬಾಂಧವ್ಯ ನಷ್ಟಗೊಳ್ಳುವುದು. ಇದರಿಂದ ದೇಶಕ್ಕೆ ಹಾನಿಯಾಗುವುದು. ಒಂದು ವೇಳೆ ಈ ಅಗ್ನಿ ಜ್ವಾಲಾಮುಖಿಯಾದರೆ ಸಂಸ್ಕೃತಿ, ಅಭಿವೃದ್ಧಿ,ನೈತಿಕತೆ ಎಲ್ಲವೂ ನಷ್ಟಗೊಳ್ಳುವುದು ಎಂದು ಬೋರ್ಡ ಹೇಳಿದೆ.
ಸಂಪಾದಕೀಯ ನಿಲುವುಯಾವುದೇ ಮುಸಲ್ಮಾನ ಅಥವಾ ಅವರ ಸಂಘಟನೆ ಎಂದಿಗೂ ಸಮಾನ ನಾಗರೀಕ ಕಾಯಿದೆಯನ್ನು ಸಮರ್ಥಿಸುವುದಿಲ್ಲ. ಏಕೆಂದರೆ, ಅವರಿಗೆ ಈಗ ಸಿಗುವ ಯಾವ ಸೌಲಭ್ಯಗಳು ಸಿಗುವುದಿಲ್ಲ, ಎನ್ನುವುದು ಸ್ಪಷ್ಟವಾಗಿದೆ. |
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು