
ಹರಿದ್ವಾರ (ಉತ್ತರಾಖಂಡ) – ಶೀಘ್ರದಲ್ಲೇ ಪಾಕಿಸ್ತಾನವು ನಾಲ್ಕು ಭಾಗ ಆಗಲಿದೆ. ಬಲೂಚಿಸ್ತಾನ ಬೇರೆ ದೇಶವಾಗುವುದು ಹಾಗೂ ಸಿಂಧ, ಪಂಜಾಬ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಇವುಗಳು ಭಾರತದಲ್ಲಿ ವಿಲೀನವಾಗುವುದು. ಬರುವ ಕಾಲದಲ್ಲಿ ಭಾರತ ಒಂದು ಮಹಾಶಕ್ತಿಯ ರೂಪದಲ್ಲಿ ಉದಯಿಸುವುದು, ಎಂದು ಯೋಗ ಗುರು ರಾಮದೇವ ಬಾಬಾ ಇವರು ಹೇಳಿದರು. ಅವರು ಪತಂಜಲಿ ಯೋಗಪೀಠದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಪಸ್ಥಿತರಿಗೆ ಉದ್ದೇಶಿಸಿ ಮಾತನಾಡುತ್ತಿದ್ದರು.
(ಸೌಜನ್ಯ : Zee 24 Kalak)
ಸನಾತನದ ಮೇಲಿನ ದಾಳಿ ಸಹಿಸಲಾಗದು !
ಯೋಗ ಗುರು ರಾಮದೇವ ಬಾಬಾ ಇವರು ಮಾತು ಮುಂದುವರೆಸುತ್ತಾ, ಇತ್ತೀಚಿಗೆ ಸನಾತನ ಧರ್ಮದ ಮೇಲೆ ಸತತವಾಗಿ ದಾಳಿ ನಡೆಯುತ್ತಿದೆ. ರಾಮಾಯಣ, ಶ್ರೀಮದ್ ಭಗವದ್ಗೀತೆ, ವೇದ ಮತ್ತು ಉಪನಿಷತ್ತುಗಳನ್ನು ಅವಮಾನ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇದೆಲ್ಲಾ ಅಂತರಾಷ್ಟ್ರೀಯ ಷಡ್ಯಂತ್ರದ ಮೂಲಕ ನಡೆಯುತ್ತಿದೆ. ಸನಾತನದ ವಿರೋಧದಲ್ಲಿ ನಡೆಯುತ್ತಿರುವ ಅಪಪ್ರಚಾರ ನಾವು ಸಹಿಸುವುದೇ ಇಲ್ಲ.
ಸನಾತನ ಧರ್ಮಕ್ಕೆ ಕೀಳಾಗಿ ತೋರಿಸಲು ದೇಶದಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸನಾತನ ಧರ್ಮದ ಮೇಲೆ ಒಮ್ಮೆ, ನಮ್ಮ ಮಹಾಪುರುಷರ ಚರಿತ್ರೆಗಳ ಮೇಲೆ ಒಮ್ಮೆ, ಈ ರೀತಿಯಾಗಿ ಒಂದೊಂದು ಕಪ್ಪು ಚುಕ್ಕೆ ಹಚ್ಚುತ್ತಾರೆ. ಇದನ್ನು ಯಾರು ಮಾಡುತ್ತಾರೆ ಅವರು ರಾಷ್ಟ್ರ ವಿರೋಧಿಯಾಗಿರುವರು. ಇದೆಲ್ಲಾ ವಿದೇಶಿ ಶಕ್ತಿಯ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.