ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಾಗಿರುವ ಆಶ್ಚರ್ಯಕರ ಬದಲಾವಣೆ !

ಶ್ರೀ. ಭೂಷಣ ಕೆರಕರ

ಎಲ್ಲರಿಗೂ ಧರ್ಮಶಿಕ್ಷಣ ನೀಡಿ ರಾಷ್ರ್ಟ-ಧರ್ಮಕ್ಕಾಗಿ ಕೃತಿಶೀಲರನ್ನಾಗಿಸುವುದು ಮತ್ತು ಹಿಂದೂ ರಾಷ್ರ್ಟ ಸ್ಥಾಪನೆಗಾಗಿ ಸಂಘಟಿಸುವುದು, ಎಂಬ ಧ್ಯೇಯವನ್ನಿಟ್ಟು ‘ಸನಾತನ ಪ್ರಭಾತ’ವು ಕಳೆದ ೨೩ ವರ್ಷಗಳಿಂದ ಕಾರ್ಯವನ್ನು ಮಾಡುತ್ತಿದೆ. ಇಂತಹ ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳ ಸೇವೆಯು ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಸದ್ಗುರು ಮತ್ತು ಸಂತರು ವಾಸಿಸುತ್ತಿರುವ ರಾಮನಾಥಿ, ಗೋವಾ ದಲ್ಲಿನ ಸನಾತನದ ಆಶ್ರಮದಲ್ಲಿ ಕಳೆದ ೨೩ ವರ್ಷಗಳಿಂದ ನಡೆಯುತ್ತಿದೆ. ಆಶ್ರಮದ ‘ಸನಾತನ ಪ್ರಭಾತ’ದ ಈ ಕಚೇರಿಯನ್ನು ೨೦೧೯ ರಲ್ಲಿ ನವೀಕರಣಗೊಳಿಸಲಾಯಿತು. ಆಗ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಈ ಕಚೇರಿ ಚೈತನ್ಯಮಯ ವಾಸ್ತುವಾಯಿತು. ಈ ವಾಸ್ತುವಿನಲ್ಲಿ ‘ಸನಾತನ ಪ್ರಭಾತ’ದ ವೈಶಿಷ್ಟ್ಯಗಳು ಮತ್ತು ಇತರ ಮಾಹಿತಿಗಳಿರುವ ಒಂದು ಫಲಕವನ್ನೂ ಹಚ್ಚಲಾಗಿದೆ. ಈ ಫಲಕದ ಮಧ್ಯಭಾಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವಿದೆ. ವಿಶೇಷವೆಂದರೆ ಆ ಫಲಕವನ್ನು ವಾಸ್ತುವಿನಲ್ಲಿ ಹಾಕಿದ ದಿನವೇ ಛಾಯಾಚಿತ್ರದಲ್ಲಿ ಮುಂದಿನಂತೆ ವೈಶಿಷ್ಟ್ಯಪೂರ್ಣ ಬದಲಾವಣೆಗಳು ಕಂಡುಬಂದವು.

೧. ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಿ ಜೀವಂತಿಕೆಯ ಅರಿವಾಗುವುದು ಹಾಗಾಗಿ ಆ ಛಾಯಾಚಿತ್ರವನ್ನು ಯಾವ ಬದಿಯಿಂದ ನೋಡಿದರೂ, ಅವರು ನಮ್ಮತ್ತ ನೋಡುತ್ತಿರುವುದು ಗಮನಕ್ಕೆ ಬರುವುದು

ಈ ಫಲಕದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಬರೆಯುತ್ತಿರುವ ಭಂಗಿಯ ಛಾಯಾಚಿತ್ರವಿದೆ. ಈ ಛಾಯಾಚಿತ್ರದತ್ತ ಎಲ್ಲಿಂದ (ಫಲಕದ ಎದುರಿನಿಂದ, ಎಡಬದಿಯಿಂದ ಮತ್ತು ಬಲ ಬದಿಯಿಂದ) ನೋಡಿದರೂ ‘ಪರಾತ್ಪರ ಗುರು ಡಾ. ಆಠವಲೆ ಯವರ ಸಂಪೂರ್ಣ ಶರೀರ, ಹಾಗೆಯೇ ಅವರ ಕೈಯಲ್ಲಿನ ಲೇಖನಿ ಮತ್ತು ಬರೆಯಲು ಕಾಗದ ಹಾಕಿಟ್ಟಿರುವ ಪ್ಯಾಡ್ ಇದೆಲ್ಲವೂ ಸಂಪೂರ್ಣವಾಗಿ ನಮ್ಮ ದಿಶೆಯಿಂದ ತಿರುಗುತ್ತಿವೆ ಹಾಗೂ ಪರಾತ್ಪರ ಗುರುಗಳು ನಮ್ಮತ್ತಲೇ ನೋಡುತ್ತಿದ್ದಾರೆ’, ಎಂದರಿವಾಗುತ್ತದೆ.

(ಛಾಯಾಚಿತ್ರದಲ್ಲಿನ ವಾಯುತತ್ತ್ವರೂಪಿ ಚೈತನ್ಯದ ಪಸರಣವು ಹೆಚ್ಚಾದ ಹಾಗೆ ಛಾಯಾಚಿತ್ರವು ಹೆಚ್ಚು ಸಜೀವ ಎನಿಸುತ್ತದೆ. ಅದರಲ್ಲಿನ ತೇಜತತ್ತ್ವದ ಹರಡುವಿಕೆಯು ಹೆಚ್ಚಾದಂತೆ, ಅದು ಹೆಚ್ಚು ತೇಜಸ್ವಿಯಾಗಿ ಕಾಣಿಸುತ್ತದೆ; ಆದರೆ ವಾಯುತತ್ತ್ವದ ಆಧಾರದಿಂದ ಮಾತ್ರ ಅದು ಹೆಚ್ಚು ಸಜೀವವಾಗುತ್ತದೆ, ಅಂದರೇ ‘ಪ್ರತ್ಯಕ್ಷದಲ್ಲಿ ಅವರೇ ಇದ್ದಾರೆ’, ಇಷ್ಟೊಂದು ಅದು ಸಜೀವವಾಗುತ್ತದೆ. – ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ‘ಓರ್ವ ವಿದ್ವಾಂಸ’ ಎಂಬ ಹೆಸರಿನಿಂದಲೂ ಬರೆಯುತ್ತಾರೆ. (೩.೧.೨೦೧೨))

೨. ಪರಾತ್ಪರ ಗುರು ಡಾಕ್ಟರರು ಸ್ವತಃ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳುವುದು

೨೦೧೯ ರಲ್ಲಿ ಈ ಛಾಯಾಚಿತ್ರವನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, ”ಫಲಕದಲ್ಲಿರುವ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಕೈಯಲ್ಲಿನ ಲೇಖನಿಯೂ ಅಲುಗಾಡುತ್ತಿರುವುದು ಅರಿವಾಗುತ್ತದೆ. ಅಂದರೆ ಪರಾತ್ಪರ ಗುರುಗಳು ‘ಸನಾತನ ಪ್ರಭಾತ’ಕ್ಕಾಗಿ ಬರವಣಿಗೆಯನ್ನು ಮಾಡುತ್ತಿದ್ದಾರೆ ಮತ್ತು ಅವರೇ ‘ಸನಾತನ ಪ್ರಭಾತ’ದ ಮಾಧ್ಯಮ ದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ. ಹಾಗೂ ‘ಸನಾತನ ಪ್ರಭಾತ’ದ ವಾಸ್ತುವಿನಲ್ಲಿಯೂ ಶಾಂತಿಯ ಅನುಭೂತಿ ಬರುತ್ತಿದೆ’’ ಎಂದು ಹೇಳಿದರು.

೩. ಪರಾತ್ಪರ ಗುರುದೇವರ ಕೃಪೆಯಿಂದ ‘ಸನಾತನ ಪ್ರಭಾತ’ದ ಕಛೇರಿಯ ವಾಸ್ತುವಿನಲ್ಲಿ ಧ್ಯಾನಮಂದಿರದಷ್ಟೇ ಚೈತನ್ಯವು ನಿರ್ಮಾಣವಾಗುವುದು

ನವೀಕರಣದ ನಂತರ ‘ಸನಾತನ ಪ್ರಭಾತ’ದ ವಾಸ್ತುವಿನ ಬಗ್ಗೆ ಪರಾತ್ಪರ ಗುರುದೇವರು, ”ಧ್ಯಾನಮಂದಿರದಲ್ಲಿರುವಷ್ಟೇ ಚೈತನ್ಯವು ‘ಸನಾತನ ಪ್ರಭಾತ’ದ ವಾಸ್ತುವಿನಲ್ಲಿಯೂ ನಿರ್ಮಾಣವಾಗಿದೆ” ಎಂದರು. ನಿಜವಾಗಿಯೂ ವಾಸ್ತುವಿನಲ್ಲಿ ಇಂತಹ ಚೈತನ್ಯವು ನಿರ್ಮಿತಿಯೆಂದರೆ, ಪರಾತ್ಪರ ಗುರುದೇವರ ಕೃಪೆಯೇ ಆಗಿದೆ. ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಗೆ, ಹಾಗೆಯೇ ಆಶ್ರಮದಲ್ಲಿ ವಾಸಿಸುತ್ತಿರುವ ಮತ್ತು ಆಶ್ರಮದಲ್ಲಿ ಸ್ವಲ್ಪ ಸಮಯಕ್ಕಾಗಿ ಬರುವ ಸಂತರಿಗೆ ಮತ್ತು ಸಾಧಕರಿಗೆ ಈ ವಾಸ್ತುವಿನಲ್ಲಿ ಚೈತನ್ಯದ ಸ್ತರದ ಅನುಭೂತಿಗಳು ಬರುತ್ತಿವೆ. ‘ಪರಾತ್ಪರ ಗುರುದೇವರೇ, ತಮ್ಮ ಕೃಪೆಯಿಂದಲೇ ಸಾಧಕರಾದ ನಮ್ಮೆಲ್ಲರಿಗೆ ಚೈತನ್ಯಮಯ ವಾಸ್ತುವಿನಲ್ಲಿ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಮತ್ತು ಆ ಮಾಧ್ಯಮದಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ, ಇದಕ್ಕಾಗಿ ನಾವು ತಮ್ಮ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞರಾಗಿದ್ದೇವೆ !’

‘ಹೇ ಗುರುದೇವಾ, ತಮ್ಮ ಕೃಪೆಯಿಂದ ಲಭಿಸಿದ ಚೈತನ್ಯಮಯ ವಾಸ್ತುವಿನಲ್ಲಿ ಸಾಧಕರಾದ ನಮ್ಮೆಲ್ಲರಿಂದ ‘ಸನಾತನ ಪ್ರಭಾತ’ದ ಸೇವೆಯು ಏಕಾಗ್ರತೆಯಿಂದ, ಪರಿಪೂರ್ಣ ಮತ್ತು ಭಾವಪೂರ್ಣ ರೀತಿಯಿಂದಾಗಲಿ ಮತ್ತು ಆ ಮಾಧ್ಯಮದಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಿಂದಾಗಲಿ, ಹಾಗೆಯೇ ತಮ್ಮ ಕೃಪೆ ಯಿಂದ ವಾಸ್ತುವಿನಲ್ಲಿ ನಿರ್ಮಾಣವಾದ ಚೈತನ್ಯದಲ್ಲಿಯೂ ಹೆಚ್ಚಳ ವಾಗುತ್ತಿರಲಿ. ‘ಸನಾತನ ಪ್ರಭಾತ’ದ ಮಾಧ್ಯಮದಿಂದ ರಾಷ್ರ್ಟ ಮತ್ತು ಧರ್ಮ ಜಾಗೃತಿಯ ಕಾರ್ಯವು ವ್ಯಾಪಕವಾಗಿ ಆದಷ್ಟು ಬೇಗ ಹಿಂದೂ ರಾಷ್ರ್ಟದ ಸ್ಥಾಪನೆಯಾಗಲಿ’, ಇದೇ ತಮ್ಮ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆÉ !’ – ಶ್ರೀ. ಭೂಷಣ ಕೇರಕರ (ಆಧ್ಯಾತ್ಮಿಕ ಮಟ್ಟ ಶೇ. ೬೮), ಸಹಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ ಸಮೂಹ (೧೧.೪.೨೦೨೨)