ಪಾಕಿಸ್ತಾನಕ್ಕೆ ಭಾರತದ ಕರೆ

ನವ ದೆಹಲಿ – ಭಾರತವು ಪಾಕಿಸ್ತಾನಕ್ಕೆ ಅದರ ಸೆರೆಮನೆಯಲ್ಲಿ ಶಿಕ್ಷೆ ಪೂರ್ಣಗೊಳಿಸಿರುವ ಭಾರತೀಯ ಮತ್ತು ಯಾರ ನಾಗರಿಕತ್ವ ಭಾರತೀಯರೆಂದು ಖಾತ್ರಿಯಾಗಿರುವವರನ್ನು ಬಿಡುಗಡೆಗೊಳಿಸುವಂತೆ ಕರೆ ನೀಡಿದೆ. ಭಾರತವು ಒಟ್ಟು 631 ಮೀನುಗಾರರು ಮತ್ತು ಇತರೆ 2 ನಾಗರಿಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಿದೆ. ಇದಲ್ಲದೇ ಪಾಕಿಸ್ತಾನದ ವಶದಲ್ಲಿ ಭಾರತೀಯ ನಾಗರಿಕ ಎಂದು ಸಾಧ್ಯತೆಯಿರುವ 30 ಮೀನುಗಾರರು ಮತ್ತು 22 ನಾಗರಿಕರನ್ನು ತಕ್ಷಣವೇ ಭಾರತಿಯ ರಾಯಭಾರ ಕಚೇರಿಗೆ ಸಂಪರ್ಕಿಸುವ ಸೌಲಭ್ಯವನ್ನು ಒದಗಿಸುವಂತೆ ಕೂಡ ಭಾರತವು ಕೋರಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 2008 ರಲ್ಲಿ ಮಾಡಿರುವ ಕರಾರಿನಂತೆ ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಮೀನುಗಾರರು ಮತ್ತು ನಾಗರಿಕ ಕೈದಿಗಳ ಪಟ್ಟಿಯನ್ನು ಪರಸ್ಪರರಿಗೆ ಒಪ್ಪಿಸಲು ಎರಡೂ ದೇಶಗಳಲ್ಲಿ ಒಪ್ಪಂದ ಆಗಿತ್ತು. ಅದಕ್ಕನುಸಾರ ಭಾರತವು ಈ ಕರೆ ನೀಡಿದೆ.
India asks Pakistan to release and repatriate 631 Indian fishermen and two civilian prisoners who have completed their jail-term and whose nationality has been confirmed.
— All India Radio News (@airnewsalerts) January 2, 2023
ವಿದೇಶಾಂಗ ಸಚಿವಾಲಯ ತನ್ನ ಮನವಿಯಲ್ಲಿ ಭಾರತವು ಸಧ್ಯಕ್ಕೆ ತನ್ನ ನಿಯಂತ್ರಣದಲ್ಲಿರುವ 339 ಪಾಕಿಸ್ತಾನಿ ಕೈದಿಗಳ ಮತ್ತು 95 ಮೀನುಗಾರರ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಿದೆ. ಅದೇ ರೀತಿ ಪಾಕಿಸ್ತಾನವು ತನ್ನ ವಶದಲ್ಲಿರುವ 51 ನಾಗರಿಕ ಕೈದಿಗಳನ್ನು ಮತ್ತು 654 ಮೀನುಗಾರರ ಪಟ್ಟಿಯನ್ನು ಭಾರತಕ್ಕೆ ನೀಡಿದೆ. ಇದರಲ್ಲಿ ಬಹುಸಂಖ್ಯಾತರು ಭಾರತೀಯರಾಗಿದ್ದಾರೆ ಮತ್ತು ಕೆಲವರನ್ನು ಭಾರತೀಯರೆಂದು ನಂಬಲಾಗುತ್ತಿದೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ