ಮಧ್ಯಪ್ರದೇಶದಲ್ಲಿ ೩೦೦ ಜನರ, ಛತ್ತೀಸಗಡದಲ್ಲಿ ೭೦ ಕುಟುಂಬಗಳ ಹಿಂದೂ ಧರ್ಮದಲ್ಲಿ ಘರವಾಪಸಿ !

ಬಾಗೇಶ್ವರ ಧಾಮದ ಪೀಠಾಧೀಶ್ವರರಾದ ಧಿರೇಂದ್ರ ಶಾಸ್ತ್ರಿ

ದಮೋಹ (ಮಧ್ಯಪ್ರದೇಶ) – ಇಲ್ಲಿನ ರಾಮಕಥಾ ಕಾರ್ಯಕ್ರಮದಲ್ಲಿ ಬಾಗೇಶ್ವರ ಧಾಮದ ಪೀಠಾಧೀಶ್ವರರಾದ ಧಿರೇಂದ್ರ ಶಾಸ್ತ್ರಿಯವರು ೩೦೦ ಜನರನ್ನು ಹಿಂದೂ ಧರ್ಮಕ್ಕೆ ತಂದರು. ಇನ್ನೊಂದು ಕಡೆಯಲ್ಲಿ ಛತ್ತೀಸಗಡ ರಾಜ್ಯದಲ್ಲಿನ ಜಶಪೂರದಲ್ಲಿ ವಿಶಾಲ ಹಿಂದೂ ಸಮ್ಮೇಳನದಲ್ಲಿ ‘ಅಖಿಲ ಭಾರತೀಯ ಘರವಾಪಸಿ’ಯ ಪ್ರಮುಖರಾದ ಪ್ರಬಲ ಪ್ರತಾಪ ಸಿಂಹ ಜೂದೇವರವರು ೫೦ ಕುಟುಂಬಗಳನ್ನು ಪುನಃ ಹಿಂದೂ ಧರ್ಮಕ್ಕೆ ತಂದಿದ್ದಾರೆ. ಈ ಹಿಂದೂಗಳನ್ನು ಕ್ರೈಸ್ತ ಮಿಶನರಿಗಳು ಆಮಿಷಗಳನ್ನು ತೋರಿಸಿ ಮತಾಂತರ ಮಾಡಿದ್ದರು. ನಾತಾಳದ ದಿನದಂದು ಈ ಕಾರ್ಯಕ್ರಮ ನೆರವೇರಿತು. ಛತ್ತೀಸಗಡದ ನಾರಾಯಣಪುರದಲ್ಲಿಯೂ ನಾತಾಳದ ದಿನದಂದು ೨೦ ಕುಟುಂಬಗಳಿಗೆ ಗಂಗಾಜಲ ನೀಡಿ ಅವರ ಘರವಾಪಸಿ ಮಾಡಿಸಲಾಯಿತು.