
ಭಾಗಲಪುರ (ಬಿಹಾರ) – ಇಲ್ಲಿಯ ಪೊಲೀಸರು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಂಜಯ ಕುಮಾರ್ ಮತ್ತು ಗುಡ್ಡು ಶರ್ಮ ಈ ಇಬ್ಬರು ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ನಡೆಸಿದಾಗ ಒಂದು ಮಸೀದಿಯ ಪಕ್ಕದಲ್ಲಿರುವ ಮನೆಯಲ್ಲಿ ಬಂದುಕುಗಳನ್ನು ತಯಾರಿಸುವ ಕಾರ್ಖಾನೆ ಇರುವ ಮಾಹಿತಿ ದೊರೆಯಿತು. ಈ ಮನೆಯ ಮಾಲೀಕ ಡಾ. ಮಹಮ್ಮದ್ ಇಕ್ಬಾಲ್ ಅನ್ಸಾರಿ ಆಗಿದ್ದು ಕಾರ್ಖಾನೆ ನಡೆಸುವವನು ಮಹಮ್ಮದ್ ಪೈಝಲ್ ಆಗಿದ್ದಾನೆ. ಪೊಲೀಸರು ಈ ಮನೆಯ ಮೇಲೆ ದಾಳಿ ನಡೆಸಿ ಡಾ. ಅನ್ಸಾರಿ ಇವರ ಮಗ ಮಿಕಾಯಿಲ್ ನನ್ನು ಬಂದಿಸಿದ್ದಾರೆ. ಪೊಲೀಸರು ಫೈಝಲ್ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ; ಆದರೆ ಫೈಝಲ್ ಪರಾರಿಯಾಗಿರುವುದು ತಿಳಿದು ಬಂದಿದೆ. ಪೊಲೀಸರು ಈ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯ ಸಂಬಂಧ ಬಂಗಾಲ ಮತ್ತು ಜಾರ್ಖಂಡ ರಾಜ್ಯದವರಿಗೆ ಇರುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವು`ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಿದ್ದರೇ ಅವರ ಮನೆಯಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಕಾರ್ಖಾನೆ ಹೇಗೆ ಸಾಧ್ಯ ?’, ಎಂದು ಜಾತ್ಯತೀತರಿಗೆ ಹೇಗೆ ಪ್ರಶ್ನೆ ಉದ್ಭವಿಸುವುದಿಲ್ಲ ? |
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ
ಉತ್ತರ ಪ್ರದೇಶ: ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿದ್ದ ಧಾರ್ಮಿಕ ಸ್ಥಳದ ಅತಿಕ್ರಮಣ ತೆರವು!
ಭಯೋತ್ಪಾದಕರ ಬೆಂಬಲಿಗರಿಗೆ ಸಿಂಧೂ ನದಿ ನೀರು ಸಿಗುವುದಿಲ್ಲ! – ರಕ್ಷಣಾ ಸಚಿವ