‘ಭಾರತವು ಮುಸಲ್ಮಾನರು ವಾಸಿಸಲು ಯೋಗ್ಯವಲ್ಲದ ಕಾರಣ, ನಾನು ನನ್ನ ಮಕ್ಕಳನ್ನು ವಿದೇಶದಲ್ಲಿಯೇ ಇರಲು ಹೇಳಿದೆ !’ (ಅಂತೆ)

ಬಿಹಾರದ ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಬಾರಿ ಸಿದ್ದಿಕಿ ಅವರಿಂದ ದೇಶಕ್ಕೆ ಮಾನಹಾನಿ ಮಾಡುವ / ಅಪಕೀರ್ತಿ ತರುವ ಆಕ್ರೋಶದ ಹೇಳಿಕೆ!

ಬಿಹಾರದ ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಬಾರಿ ಸಿದ್ದಿಕಿ

ಪಾಟಲಿಪುತ್ರ (ಬಿಹಾರ) – ಭಾರತವು ಈಗ ಮುಸಲ್ಮಾನರಿಗೆ ವಾಸಯೋಗ್ಯ ದೇಶವಾಗಿಲ್ಲ. ಹೀಗಾಗಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಮಕ್ಕಳಿಗೆ, ಅಲ್ಲಿಯೇ ನೌಕರಿ ಮಾಡಿ ಅಲ್ಲಿನ ಪೌರತ್ವ ಪಡೆಯುವಂತೆ ಹೇಳಿದ್ದೇನೆ ಎಂದು ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ಮುಖಂಡ ಅಬ್ದುಲ ಬಾರಿ ಸಿದ್ದಿಕಿ ಹೇಳಿದ್ದಾರೆ. ಆದ್ದರಿಂದ ಅವರನ್ನು ಟೀಕಿಸಲಾಗುತ್ತಿದೆ.

೧. ಅಬ್ದುಲ ಬಾರಿ ಸಿದ್ದಿಕಿ, ನನಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಮಹನು ಸದ್ಯ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಿಂದ ತೇರ್ಗಡೆಯಾಗಿದ್ದಾಳೆ. ದೇಶದಲ್ಲಿನ ವಾತಾವರಣವನ್ನು ನೋಡಿ ನಾನು ನನ್ನ ಮಕ್ಕಳಿಗೆ ಅಲ್ಲಿಯೇ ನೌಕರಿ ಮಾಡಲು ಹೇಳಿದ್ದೇನೆ. ನಿಮಗೆ ಅಲ್ಲಿನ ಪೌರತ್ವ ಸಿಕ್ಕಿದರೆ ಅದನ್ನು ಸ್ವೀಕರಿಸಿರಿ. ಭಾರತದಲ್ಲಿನ ಸದ್ಯದ ಸ್ಥಿತಿಯನ್ನು ನೋಡಿದರೆ ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಮಗೆ ಸಾಧ್ಯವಾಗಲಾರದು.

೨. ಬಿಹಾರದ ಭಾಜಪ ವಕ್ತಾರ ನಿಖಿಲ ಆನಂದ ಅವರು ಸಿದ್ದಿಕಿ ಅವರ ಹೇಳಿಕೆಯನ್ನು ಟೀಕಿಸುತ್ತಾ, ಸಿದ್ದಿಕಿಯಂತಹ ಜನರು ತಮ್ಮನ್ನು ತಾವು ಉದಾರವಾದಿಗಳು ಎಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ವಿಚಾರಧಾರೆಯು ಮದರಸಾಗಳಲ್ಲಿನ ಜನರಲ್ಲಿರುವಂತಹದ್ದಾಗಿದೆ. ತಮ್ಮ ದೇಶದ ವಿರುದ್ಧವೇ ವಿಷ ಕಾರುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಸಿದ್ದಿಕಿ ಅವರಿಗೆ ನಿಜವಾಗಿಯೂ ಈ ರೀತಿ ಅನಿಸುತ್ತಿದ್ದರೆ, ಅವರು ತನ್ನ ಜೊತೆ ತನ್ನ ಎಲ್ಲಾ ಧರ್ಮಬಾಂಧವರಿಗೂ ವಿದೇಶಕ್ಕೆ ಹೋಗಲು ಕೇಳಬೇಕು ! ಎಷ್ಟು ದೇಶಗಳು ನಿಮಗೆ ಉಳಿದುಕೊಳ್ಳಲು ಆಶ್ರಯ ನೀಡುತ್ತವೆ ಎಂಬುದೂ ನಿಮಗೆ ತಿಳಿಯುವುದು !
  • ರೋಹಿಂಗ್ಯಾ ಮುಸಲ್ಮಾನರನ್ನು ಮ್ಯಾನ್ಮಾರ್‌ನಿಂದ ಹೊರಹಾಕಲಾದ ನಂತರ, ಬಾಂಗ್ಲಾದೇಶವನ್ನು ಹೊರತುಪಡಿಸಿ (ಅದು ಕೂಡ ಬೇರೆ ದಾರಿ ಇಲ್ಲದ ಕಾರಣಕ್ಕೆ) ಯಾವುದೇ ಇಸ್ಲಾಮಿ ದೇಶವು ಅವರಿಗೆ ಸಹಾಯ ಮಾಡಲಿಲ್ಲ ಎಂಬ ವಾಸ್ತವವನ್ನು ಸಿದ್ದಿಕಿ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು!