ಸತ್ಯಶೋಧಕ ಸಮಿತಿಯ ವರದಿಯ ನಿಷ್ಕರ್ಷ

ನವದೆಹಲಿ – ಭಾರತದ ಹಿಂದಿನ ಸರಕಾರವು ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ನರಸಂಹಾರ ಸಂಪೂರ್ಣವಾಗಿ ನಿರಾಕರಿಸಿತು. ಜಾತ್ಯತೀತತೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದೂ ಸಮಾಜವನ್ನು ಬಲಿಪಶುವನ್ನಾಗಿ ಮಾಡಲಾಯಿತು, ಎಂದು ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ ಸಮೀಕ್ಷೆ ನಡೆಸಲು ಸ್ಥಾಪಿಸಲಾದ ಸತ್ಯಶೋಧಕ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಕಲಂ ೩೭೦ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿನ ಹಿಂದೂ ಅಲ್ಪಸಂಖ್ಯಾತರ ಜೀವನದ ಮೇಲೆ ಮತ್ತು ೨೦೨೦ ರ ಪ್ರಾರಂಭದಿಂದ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿ ನಡೆದಿರುವ ಹತ್ಯೆಗಳ ಸಮೀಕ್ಷೆಯ ಆಧಾರದಲ್ಲಿದೆ. ಕೆಲವು ಮುಂಚೂಣಿಯ ಕಾಶ್ಮೀರ ಹಿಂದೂ ಸಂಘಟನೆಗಳಿಂದ ರಾಹುಲ್ ಕೌಲ್, ಅಮಿತ್ ರೈನ ಮತ್ತು ವಿಠ್ಠಲ ಚೌದರಿ ಈ ೩ ಸದಸ್ಯರ ಸತ್ಯಶೋಧಕ ಸಮಿತಿಯ ಸ್ಥಾಪನೆ ಮಾಡಿದರು.
೧. ಕಾಶ್ಮೀರವನ್ನು ಇಸ್ಲಾಮಿಸ್ಥಾನ ಮಾಡಲು ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಕಣಿವೆಯಲ್ಲಿನ ನಾಯಕರು ಮತ್ತು ರಾಜಕೀಯ ಪಕ್ಷ ಇವರಿಗೆ ರಾಜ್ಯದಿಂದ ಸಂರಕ್ಷಣೆ ಪೂರೈಸಲಾಗುತ್ತದೆ. ಮೆಹಬೂಬ ಮುಫ್ತಿ, ಪಾರುಕ ಅಬ್ದುಲ್ಲಾ , ಓಮರ್ ಅಬ್ದುಲ್ಲ, ಸಜ್ಜಾದ ಲೋನ್ , ಅಲ್ಲಾಫ ಬುಖಾರಿ ಮತ್ತು ಇತರ ಅನೇಕ ರಾಜಕೀಯ ನಾಯಕರಿಗೆ ಸುರಕ್ಷೆ ಪೂರೈಸಲಾಗುತ್ತಿದೆ.
೨. ಹಿಂದೂಗಳ ಹತ್ಯೆ ಮಾಡುವವರಿಗೆ ಶಿಕ್ಷೆ ನೀಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಇವರ ಬೇಜವಾಬ್ದಾರಿತನದಿಂದ ಕಣಿವೆಯಲ್ಲಿನ ಜಿಹಾದಿಗಳಿಗೆ ಸೊಪ್ಪು ಹಾಕಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
೩. ಈ ವರದಿಯಲ್ಲಿ, ಕಾಶ್ಮೀರದಲ್ಲಿನ ಹಿಂದೂಗಳ ನರಸಂಹಾರ ನಿರಾಕರಿಸುವುದು ಕೇವಲ ಕಾಶ್ಮೀರದಲ್ಲಿನ ಹಿಂದೂಗಳಿಗಾಗಿ ವಿನಾಶಕಾರಿ ಆಗಲಿಲ್ಲ, ಉಳಿದಿರುವ ಭಾರತದಲ್ಲಿ ಕೂಡ ಜಿಹಾದದ ಪ್ರಸಾರ ನಡೆಯಿತು. ಭಾರತದ ಮೂಲೆ ಮೂಲೆಯಲ್ಲಿ ಕಟ್ಟರವಾದಿ ವಿಚಾರಧಾರೆ ವಿಸ್ತರಿಸಿತು. ಭಾರತದ ಅನೇಕ ಸ್ಥಳಗಳಲ್ಲಿ ಜಿಹಾದಿ ದಾಳಿಗಳು ನಡೆಯುತ್ತಿದೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram