ಸತ್ಯಶೋಧಕ ಸಮಿತಿಯ ವರದಿಯ ನಿಷ್ಕರ್ಷ

ನವದೆಹಲಿ – ಭಾರತದ ಹಿಂದಿನ ಸರಕಾರವು ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ನರಸಂಹಾರ ಸಂಪೂರ್ಣವಾಗಿ ನಿರಾಕರಿಸಿತು. ಜಾತ್ಯತೀತತೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದೂ ಸಮಾಜವನ್ನು ಬಲಿಪಶುವನ್ನಾಗಿ ಮಾಡಲಾಯಿತು, ಎಂದು ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ ಸಮೀಕ್ಷೆ ನಡೆಸಲು ಸ್ಥಾಪಿಸಲಾದ ಸತ್ಯಶೋಧಕ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಕಲಂ ೩೭೦ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿನ ಹಿಂದೂ ಅಲ್ಪಸಂಖ್ಯಾತರ ಜೀವನದ ಮೇಲೆ ಮತ್ತು ೨೦೨೦ ರ ಪ್ರಾರಂಭದಿಂದ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿ ನಡೆದಿರುವ ಹತ್ಯೆಗಳ ಸಮೀಕ್ಷೆಯ ಆಧಾರದಲ್ಲಿದೆ. ಕೆಲವು ಮುಂಚೂಣಿಯ ಕಾಶ್ಮೀರ ಹಿಂದೂ ಸಂಘಟನೆಗಳಿಂದ ರಾಹುಲ್ ಕೌಲ್, ಅಮಿತ್ ರೈನ ಮತ್ತು ವಿಠ್ಠಲ ಚೌದರಿ ಈ ೩ ಸದಸ್ಯರ ಸತ್ಯಶೋಧಕ ಸಮಿತಿಯ ಸ್ಥಾಪನೆ ಮಾಡಿದರು.
೧. ಕಾಶ್ಮೀರವನ್ನು ಇಸ್ಲಾಮಿಸ್ಥಾನ ಮಾಡಲು ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಕಣಿವೆಯಲ್ಲಿನ ನಾಯಕರು ಮತ್ತು ರಾಜಕೀಯ ಪಕ್ಷ ಇವರಿಗೆ ರಾಜ್ಯದಿಂದ ಸಂರಕ್ಷಣೆ ಪೂರೈಸಲಾಗುತ್ತದೆ. ಮೆಹಬೂಬ ಮುಫ್ತಿ, ಪಾರುಕ ಅಬ್ದುಲ್ಲಾ , ಓಮರ್ ಅಬ್ದುಲ್ಲ, ಸಜ್ಜಾದ ಲೋನ್ , ಅಲ್ಲಾಫ ಬುಖಾರಿ ಮತ್ತು ಇತರ ಅನೇಕ ರಾಜಕೀಯ ನಾಯಕರಿಗೆ ಸುರಕ್ಷೆ ಪೂರೈಸಲಾಗುತ್ತಿದೆ.
೨. ಹಿಂದೂಗಳ ಹತ್ಯೆ ಮಾಡುವವರಿಗೆ ಶಿಕ್ಷೆ ನೀಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಇವರ ಬೇಜವಾಬ್ದಾರಿತನದಿಂದ ಕಣಿವೆಯಲ್ಲಿನ ಜಿಹಾದಿಗಳಿಗೆ ಸೊಪ್ಪು ಹಾಕಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
೩. ಈ ವರದಿಯಲ್ಲಿ, ಕಾಶ್ಮೀರದಲ್ಲಿನ ಹಿಂದೂಗಳ ನರಸಂಹಾರ ನಿರಾಕರಿಸುವುದು ಕೇವಲ ಕಾಶ್ಮೀರದಲ್ಲಿನ ಹಿಂದೂಗಳಿಗಾಗಿ ವಿನಾಶಕಾರಿ ಆಗಲಿಲ್ಲ, ಉಳಿದಿರುವ ಭಾರತದಲ್ಲಿ ಕೂಡ ಜಿಹಾದದ ಪ್ರಸಾರ ನಡೆಯಿತು. ಭಾರತದ ಮೂಲೆ ಮೂಲೆಯಲ್ಲಿ ಕಟ್ಟರವಾದಿ ವಿಚಾರಧಾರೆ ವಿಸ್ತರಿಸಿತು. ಭಾರತದ ಅನೇಕ ಸ್ಥಳಗಳಲ್ಲಿ ಜಿಹಾದಿ ದಾಳಿಗಳು ನಡೆಯುತ್ತಿದೆ.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ