ರಾಜ್ಯದಿಂದ ೨೯೦ ಕೋಟಿ ರೂಪಾಯಿ ನಗದು, ೫೦೦ ಕೋಟಿ ಮಾದಕ ವಸ್ತುಗಳು ಮತ್ತು ೪ ಲಕ್ಷ ಲೀಟರ್ ಸಾರಾಯಿ ವಶಕ್ಕೆ !

ಗುಜರಾತ್ ನಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಯ ಮತದಾನದ ಪೂರ್ಣ

ಕರ್ಣಾವತಿ (ಗುಜರಾತ) – ಗುಜರಾತ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕಾಗಿ ಡಿಸೆಂಬರ್ ೧ ರಂದು ಮತದಾನ ನಡೆದಿದೆ. ಈ ಮತದಾನದ ಮೊದಲು ರಾಜ್ಯಾದ್ಯಂತ ಚುನಾವಣೆ ಆಯೋಗದ ಮಾಧ್ಯಮದಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ೨೯೦ ಕೋಟಿ ರೂಪಾಯಿ ನಗದು, ಮಾದಕ ವಸ್ತುಗಳು, ಸಾರಾಯಿ ಸಂಗ್ರಹ ಮತ್ತು ಉಡುಗೊರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ೨೦೧೭ ರಲ್ಲಿನ ವಿಧಾನಸಭಾ ಚುನಾವಣೆಯ ತುಲನೆಯಲ್ಲಿ ಈ ಸಾರಿ ವಶಪಡಿಸ ಕೊಳ್ಳಲಾಗಿರುವ ಹಣದಲ್ಲಿ ಶೇಕಡಾ ೧೦ ರಷ್ಟು ಹೆಚ್ಚಳವಾಗಿದೆ. ಬೇರೆ ಬೇರೆ ಇಲಾಖೆಯ ಸಹಾಯದಿಂದ ಚುನಾವಣೆ ಆಯೋಗ ಈ ಕಾರ್ಯಾಚರಣೆ ಮಾಡಿದೆ. ಉಗ್ರ ನಿಗ್ರಹ ದಳದ ಸಹಾಯದಿಂದ ವಡೋದರಾ (ಗ್ರಾಮೀಣ) ಮತ್ತು ವಡೋದರಾ (ನಗರ) ಮತದಾರ ಕ್ಷೇತ್ರದಲ್ಲಿ ನಡೆಸಿರುವ ದಾಳಿಯಲ್ಲಿ ೪೭೮ ಕೋಟಿ ರೂಪಾಯಿ ೧೪೩ ಕೇಜಿ ಮೆಫೆಡ್ರೋನ್ ಈ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ. ಇದರ ಜೊತೆಗೆ ೬೧ ಕೋಟಿ ೯೬ ಲಕ್ಷ ರೂಪಾಯಿಯ ಬೇರೆ ಮಾದಕ ವಸ್ತುಗಳ ಜೊತೆಗೆ, ೧೪ ಕೋಟೆ ೮೮ ಲಕ್ಷ ರೂಪಾಯಿಯ ೪ ಲಕ್ಷ ಲೀಟರ್ ಸಾರಾಯಿ ಕೂಡಾ ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

  • `ಚುನಾವಣೆಯಲ್ಲಿ ಹಣ ನೀಡಿ ಮತ ಖರೀದಿಸಲಾಗುತ್ತದೆ’, ಎಂದು ಸಾಮಾನ್ಯ ಜನರಿಗೆ ತಿಳಿದಿರುವುದರಿಂದ ೨೯೦ ಕೋಟಿ ರೂಪಾಯಿ ನಗದು ದೊರೆತಿರುವುದು ಆಶ್ಚರ್ಯ ಎಂದು ಹೇಳಲು ಸಾಧ್ಯವಿಲ್ಲ. ಅದರ ವಿರುದ್ಧ ವಶಪಡಿಸಿಕೊಂಡಿರುವ ಹಣಕ್ಕಿಂತ ಹಂಚಲಾಗಿರುವ ಮತ್ತು ವಶಪಡಿಸಿಕೊಳ್ಳಲಾಗದೆ ಇರುವ ಹಣ ಎಷ್ಟು ಇರಬಹುದು ಇದನ್ನು ಊಹಿಸಲು ಸಾಧ್ಯವಿಲ್ಲ !
  • ಸಾರಾಯಿ ನಿಷೇಧ ಇರುವ ರಾಜ್ಯದಲ್ಲಿ ೪ ಲಕ್ಷ ಲೀಟರ್ ಸಾರಾಯಿ ವಶ ಪಡಿಸಿಕೊಳ್ಳಬಹುದು, ಇದರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಒಂದು ನಾಟಕವಾಗಿ ನಡೆಯುತ್ತಿದೆ, ಇದು ಸ್ಪಷ್ಟವಾಗುತ್ತದೆ !