ಆಂದೋಲನಕಾರರಿಂದ ಪೊಲೀಸ ಠಾಣೆಯ ಮೇಲೆ ದಾಳಿ : ೩೬ ಪೊಲೀಸರಿಗೆ ಗಾಯ

ತಿರುವನಂತಪುರಂ (ಕೇರಳ) – ಕೇರಳದ ವಿಝಿಜಮ ಇಲ್ಲಿ ಅದಾನಿ ಬಂದರಿನ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಸ್ಥಳೀಯ ಜನರು ಕೆಲವು ತಿಂಗಳಿಂದ ವಿರೋಧಿಸುತ್ತಿದ್ದಾರೆ. ಅವರು ವಿವಿಧ ಮಾಧ್ಯಮದ ಮೂಲಕ ಆಂದೋಲನ ನಡೆಸುತ್ತಾ ಅದನ್ನು ವಿರೋಧಿಸುತ್ತಿದ್ದಾರೆ; ಆದರೆ ನವಂಬರ್ ೨೭ ರಂದು ನಡೆದ ಆಂದೋಲನ ಹಿಂಸಾಚಾರಕ್ಕೆ ತಿರುಗಿದೆ. ಈ ಸಮಯದಲ್ಲಿ ಆಂದೋಲನಕಾರರು ಇಲ್ಲಿಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ೩೬ ಪೊಲೀಸರು ಗಾಯಗೊಂಡಿದ್ದಾರೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.
Mob led by Latin Catholic Church halts construction at Vizhinjam port, attacks police station with sticks and stones, 15 priests bookedhttps://t.co/DNUYwltAh2
— OpIndia.com (@OpIndia_com) November 28, 2022
ಆಂದೋಲನಕಾರರಲ್ಲಿ ಸುಮಾರು ೫೦ ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಅದರಲ್ಲಿನ ೫ ಜನರಿಗೆ ವಶಕ್ಕೆ ಪಡೆಯಲಾಗಿದೆ. ಆಂದೋಲನಕಾರರು ಆಕ್ರೋಶಗೊಂಡು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಠಾಣೆಯಲ್ಲಿನ ಮಹತ್ವದ ಕಾಗದ ಪತ್ರಗಳು ನಷ್ಟವಾಗಿವೆ. ಹಾಗೂ ೪ ಜೀಪು ಮತ್ತು ೨೦ ದ್ವಿಚಕ್ರ ವಾಹನಗಳು ಹಾನಿಗೊಳಗೊಂಡಿವೆ. ಆಂದೋಲನಕಾರರು ಲಾಠಿಗಳು ಮತ್ತು ಕಲ್ಲುಗಳ ಮೂಲಕ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ಪರಿಸರದಲ್ಲಿ ಬಿಗುವಿನ ವಾತಾವರಣವಿದ್ದು, ಈ ಪ್ರದೇಶದಲ್ಲಿ ೨೦೦ ಕ್ಕೂ ಹೆಚ್ಚು ಪೊಲೀಸರನ್ನು ನೇಮಕ ಮಾಡಲಾಗಿದೆ.
`ಲ್ಯಾಟಿನ್ ಕೆಥೋಲಿಕ್ ಡೈಯೋಜಿಸ್’ ಈ ಚರ್ಚ ಸಂಸ್ಥೆಯ ಮೂಲಕ ಆಂದೋಲನ ನಡೆಸಲಾಗುತ್ತಿದೆ !ಆರ್ಚ್ ಬಿಷಪ್ ಥಾಮಸ್ ಜೆ ನೆಟ್ಟೋ ಹಾಗೂ ಇತರ ಪಾದ್ರಿಗಳ ವಿರುದ್ಧ ದೂರು ದಾಖಲು ! ಚರ್ಚ ಸಂಸ್ಥೆ ಮತ್ತು ಪಾದ್ರಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ ! ಯಾವಾಗಲೂ ಹಿಂದೂಗಳ ಸಂತರನ್ನು ಟೀಕಿಸುವ ಪ್ರಗತಿ(ಅಧೊಗತಿ)ಪರರು ಮತ್ತು ಸರ್ವಧರ್ಮ ಸಮಭಾವ ಇದರ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡುವರೇ ? ಕ್ರೈಸ್ತರ `ಪಾದ್ರಿಗಳು ಎಂದರೆ ಶಾಂತಿಯ ಮೂರ್ತಿಗಳು’ ಎಂದು ಭಾರತದಲ್ಲಿ ಚಿತ್ರಿಸಿರುವ ಪ್ರತಿಮೆ ಸುಳ್ಳಾಗಿದೆ, ಈ ಮೊದಲು ಕೂಡ ಬೆಳಕಿಗೆ ಬಂದಿತ್ತು ಮತ್ತು ಈಗಲೂ ಬಂದಿದೆ. ಈ ವಿಷಯವಾಗಿ ಯಾರೂ ಏನು ಮಾತನಾಡುವುದಿಲ್ಲ ! ವಿಝಿಜಮನಲ್ಲಿ ಜನರು ಆದಾನಿ ಬಂದರಿನ ಕಾಮಗಾರಿ ನಿಲ್ಲಿಸಬೇಕು ಮತ್ತು ಕರಾವಳಿ ಸವೆತದ ಅಭ್ಯಾಸ ಮಾಡಲು ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಸ್ಥಳೀಯ ನಿವಾಸಿಗಳು, ಮೀನುಗಾರರು ಮತ್ತು `ಲ್ಯಾಟಿನ್ ಕೆಥೋಲಿಕ್ ಡೈಯೋಸೀಸ್’ ನ ಸದಸ್ಯರ ಸಮಾವೇಶವಿದೆ. ೧೨೦ ದಿನಗಳಿಂದ ನಡೆಯುತ್ತಿರುವ ಈ ಆಂದೋಲನದಲ್ಲಿ ಹಿಂಸಾಚಾರ ಕೂಡ ನಡೆದಿತ್ತು. ಇದಕ್ಕಾಗಿ ವಿಝಿಜಮ ಪೊಲೀಸರು ಲ್ಯಾಟಿನ್ ಆರ್ಚ್ ಬಿಷಪ್ ಥಾಮಸ್ ಜೆ ನೆಟ್ಟೋ ಮತ್ತು ಇತರ ಧರ್ಮ ಗುರುಗಳ ಸಹಿತ ೫೦ ಆಂದೋಲನಕಾರರ ವಿರುದ್ಧ ದೂರು ದಾಖಲಿಸಿದ್ದಾರೆ. |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case