ದೇವಸ್ಥಾನದ ಆಕಾರದ ಕೇಕ್ ಕತ್ತರಿಸಿದ ಕಾಂಗ್ರೆಸ್ಸಿನ ನಾಯಕ ಕಮಲನಾಥ್!

ಕಾಂಗ್ರೆಸ್ಸಿನ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥರು ಮಂದಿರದ ಆಕಾರದಲ್ಲಿರುವ ಕೇಕ್ ಕತ್ತರಿಸುವಾಗ

ಭೋಪಾಲ್ (ಮಧ್ಯಪ್ರದೇಶ) – ಕಾಂಗ್ರೆಸ್ಸಿನ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥರು ಮಂದಿರದ ಆಕಾರದಲ್ಲಿರುವ ಕೇಕ್ ಕತ್ತರಿಸಿ ಸಂತಾಪಜನಕ ಕೃತ್ಯ ಮಾಡಿದ್ದಾರೆ. ಇದರ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಕಮಲನಾಥರು ಮಂದಿರದ ಆಕಾರದಲ್ಲಿರುವ ಕೇಕ್ ಕತ್ತರಿಸುವುದು ಕಾಣುತ್ತಿದೆ. ಈ ಕೇಕ್ ಮೇಲೆ ಕೇಸರಿ ಬಾವುಟ ಮತ್ತು ಹನುಮಂತನ ಫೋಟೋ ಕೂಡ ಕಾಣುತ್ತಿದೆ. ನವಂಬರ್ ೧೮ ರಂದು ಕಮಲನಾಥ ಇವರ ಹುಟ್ಟುಹಬ್ಬವಿತ್ತು. ಛಿಂದವಾಡದ ೩ ದಿನದ ಪ್ರವಾಸದಲ್ಲಿರುವಾಗ ಅವರ ಬೆಂಬಲಿಗರಿಂದ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಆ ಸಮಯದಲ್ಲಿ ಈ ಘಟನೆ ನಡೆದಿದೆ.

ಇದು ಹಿಂದೂ ಧರ್ಮದ ಅಪಮಾನ ! ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನ್

ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನ್, ಕಮಲನಾಥ ಮತ್ತು ಅವರ ಕಾಂಗ್ರೆಸ್ ಪಕ್ಷ ಇದು ನಕಲಿ ಭಕ್ತರಾಗಿದ್ದಾರೆ. ದೇವರ ಜೊತೆ ಅವರಿಗೆ ಯಾವುದೇ ಸಂಬಂಧವಿಲ್ಲ. ಶ್ರೀರಾಮ ಮಂದಿರಕ್ಕೆ ವಿರೋಧ ವ್ಯಕ್ತಪಡಿಸುವ ಪಕ್ಷದ ಪ್ರತಿನಿಧಿಯಾಗಿದ್ದಾರೆ. ಈ ರೀತಿಯ ವರ್ತನೆಯಿಂದ ಚುನಾವಣೆಯಲ್ಲಿ ಸೋಲುವ ಭಯ ಕಾಣುವ ಅವರು ಹನುಮಂತನ ಭಕ್ತರಾದರು. ಕಮಲನಾಥ ಇವರು ಹನುಮಂತನ ಫೋಟೋ ಇರುವ ಕೇಕ್ ಕತ್ತರಿಸಿ, ಹಿಂದೂ ಧರ್ಮದ ಜೊತೆಗೆ ಸನಾತನ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

 

ಸಂಪಾದಕೀಯ ನಿಲುವು

  • ರಾಮಸೇತು ಧ್ವಂಸ ಮಾಡಿರುವ, ಭರತಪುರ (ರಾಜಸ್ಥಾನ) ಇಲ್ಲಿಯ ಹಿಂದೂಗಳ ಪವಿತ್ರ ಪರ್ವತ ನಾಶ ಮಾಡಿರುವ ಮತ್ತು ಈಗ ದೇವಸ್ಥಾನದ ಆಕಾರದಲ್ಲಿರುವ ಕೇಕ್ ಕತ್ತರಿಸಿರುವ ಕಾಂಗ್ರೆಸ್ಸನ್ನು ಹಿಂದೂಗಳು ರಾಜಕೀಯವಾಗಿ ಮುಗಿಸುವುದು ಅವಶ್ಯಕವಾಗಿದೆ !
  • ಕಮಲನಾಥರ ಕೃತಿಯಿಂದ ಕಾಂಗ್ರೆಸ್ಸಿನ ಪರಾಕಾಷ್ಟೆಯ ಹಿಂದೂದ್ವೇಷ ಕಾಣುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕಮಲನಾಥ ಇವರನ್ನು ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರ ಕಾರಾಗೃಹಕ್ಕೆ ಕಳಿಸಬೇಕು !