
ತುಮಕೂರು – ಕ್ರೈಸ್ತ ಮಿಶನರಿಗಳಿಂದ ಮತಾಂತರಕ್ಕಾಗಿ ಶ್ರೀಮದ್ ಭಗವತಗೀತೆಯನ್ನು ಹೋಲುವ ‘ಗೀತಯೇ ನಿನ್ನ ಜ್ಞಾನ ಅಮೃತ’, ಹೆಸರಿನ ಪುಸ್ತಕಗಳನ್ನು ಹಂಚಲಾಗುತ್ತಿದೆ, ಎಂದು ಬಜರಂಗದಳದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಈ ಪುಸ್ತಕದ ಮಾರಾಟ ತಡೆಯುವುದಕ್ಕೆ ಬಜರಂಗದಳ ಒತ್ತಾಯಿಸಿದೆ. ಈ ಪುಸ್ತಕ ನವದೆಹಲಿಯ ಕಬಿರ ಪ್ರಿಂಟಿಂಗ್ ಪ್ರೆಸ್ನಿಂದ ಪ್ರಕಾಶಿಸಲಾಗಿದೆ. ಈ ಪುಸ್ತಕದಲ್ಲಿ ಬ್ರಹ್ಮ ದೇವರನ್ನು ‘ಬಾಬಾ ಆದಮ’, ಮಹಾದೇವರಿಗೆ ‘ಮಹಮ್ಮದ’ ಎಂಬಂತೆ ಉಲ್ಲೇಖಿಸಲಾಗಿದೆ. ಜೈನ್ ಪಂಥದಿಂದ ಪೂಜಿಸಲಾಗುವ ಆದಿನಾಥ ಇವರು ‘ಬಾಬಾ ಆದಮ’ ರೂಪದಲ್ಲಿ ಜನಿಸಿದರು. ಬಾಬಾ ಆದಮ ಬ್ರಹ್ಮನ ಗ್ರಹದಿಂದ ಬಂದಿರುವರು. ಅವರು ಬ್ರಹ್ಮನ ಅವತಾರವಾಗಿದ್ದಾರೆ, ಎಂದು ಹೇಳಲಾಗಿದೆ. ಪೊಲೀಸರ ಹೇಳಿಕೆಯ ಪ್ರಕಾರ ತುಮಕೂರಿನಲ್ಲಿ ಕ್ರೈಸ್ತ ಮಿಶನರಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮತಾಂತರಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಆಗುತ್ತದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ ! ಈಗ ಸರಕಾರವು ಇದರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !