
ತುಮಕೂರು – ಕ್ರೈಸ್ತ ಮಿಶನರಿಗಳಿಂದ ಮತಾಂತರಕ್ಕಾಗಿ ಶ್ರೀಮದ್ ಭಗವತಗೀತೆಯನ್ನು ಹೋಲುವ ‘ಗೀತಯೇ ನಿನ್ನ ಜ್ಞಾನ ಅಮೃತ’, ಹೆಸರಿನ ಪುಸ್ತಕಗಳನ್ನು ಹಂಚಲಾಗುತ್ತಿದೆ, ಎಂದು ಬಜರಂಗದಳದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಈ ಪುಸ್ತಕದ ಮಾರಾಟ ತಡೆಯುವುದಕ್ಕೆ ಬಜರಂಗದಳ ಒತ್ತಾಯಿಸಿದೆ. ಈ ಪುಸ್ತಕ ನವದೆಹಲಿಯ ಕಬಿರ ಪ್ರಿಂಟಿಂಗ್ ಪ್ರೆಸ್ನಿಂದ ಪ್ರಕಾಶಿಸಲಾಗಿದೆ. ಈ ಪುಸ್ತಕದಲ್ಲಿ ಬ್ರಹ್ಮ ದೇವರನ್ನು ‘ಬಾಬಾ ಆದಮ’, ಮಹಾದೇವರಿಗೆ ‘ಮಹಮ್ಮದ’ ಎಂಬಂತೆ ಉಲ್ಲೇಖಿಸಲಾಗಿದೆ. ಜೈನ್ ಪಂಥದಿಂದ ಪೂಜಿಸಲಾಗುವ ಆದಿನಾಥ ಇವರು ‘ಬಾಬಾ ಆದಮ’ ರೂಪದಲ್ಲಿ ಜನಿಸಿದರು. ಬಾಬಾ ಆದಮ ಬ್ರಹ್ಮನ ಗ್ರಹದಿಂದ ಬಂದಿರುವರು. ಅವರು ಬ್ರಹ್ಮನ ಅವತಾರವಾಗಿದ್ದಾರೆ, ಎಂದು ಹೇಳಲಾಗಿದೆ. ಪೊಲೀಸರ ಹೇಳಿಕೆಯ ಪ್ರಕಾರ ತುಮಕೂರಿನಲ್ಲಿ ಕ್ರೈಸ್ತ ಮಿಶನರಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮತಾಂತರಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಆಗುತ್ತದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ ! ಈಗ ಸರಕಾರವು ಇದರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!