
ಮೈನಪುರಿ (ಉತ್ತರಪ್ರದೇಶ) – ಇಲ್ಲಿ ೩ ತಿಂಗಳ ಹಿಂದೆ ಬಲಾತ್ಕಾರವಾದ ನಂತರ ಗರ್ಭಿಣಿಯಾದ ಅಪ್ರಾಪ್ತ ಯುವತಿಯನ್ನು ಜೀವಂತವಾಗಿ ಸುಡುವ ಪ್ರಯತ್ನವು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ.
ಹುಡುಗಿಯ ಊರಿನಲ್ಲಿ ವಾಸಿಸುವ ಅಭಿಷೇಕ ಎಂಬ ಹೆಸರಿನ ಯುವಕನು ೩ ತಿಂಗಳ ಹಿಂದೆ ಈ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದನು; ಆದರೆ ಆಕೆಯು ಹೆದರಿ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಕೆಲವು ದಿನಗಳ ನಂತರ ಆಕೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು, ಆಗ ಆಕೆಯ ತಪಾಸಣೆ ಮಾಡಿದಾಗ ಆಕೆ ಗರ್ಭಿಣಿಯಾಗಿರುವುದು ಗಮನಕ್ಕೆ ಬಂದಿತು. ಅನಂತರ ವಸ್ತುಸ್ಥಿತಿಯು ತಿಳಿದಾಗ ಪಂಚಾಯತ್ತಿನ ಸಭೆಯಲ್ಲಿ ಹುಡುಗಿ ಹಾಗೂ ಆರೋಪಿಗೆ ವಿವಾಹ ಮಾಡಿಸುವುದಾಗಿ ನಿಶ್ಚಯಿಸಲಾಯಿತು. ಅನಂತರ ಆರೋಪಿ ಅಭಿಷೇಕನ ತಾಯಿಯು ಸಂತ್ರಸ್ಥೆಯನ್ನು ಮನೆಗೆ ಕರೆದೊಯ್ದು ಆಕೆಯ ಮೇಲೆ ಪೆಟ್ರೋಲ್ ಸಿಂಪಡಿಸಿ ಆಕೆಯನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದಳು. ಇದರಲ್ಲಿ ಯುವತಿಯು ಗಂಭೀರವಾಗಿ ಸುಟ್ಟುಹೋಗಿದ್ದು ಆಕೆಯನ್ನು ಮೊದಲಿಗೆ ಮೈನಪುರಿಯ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಸೈಫಯಿ ಆಸ್ಪತ್ರೆಗೆ ಒಯ್ಯಲಾಯಿತು.
ಸಂಪಾದಕೀಯ ನಿಲುವುಇಂತಹವರಿಗೆ ಗಲ್ಲುಶಿಕ್ಷೆಯಾಗಲು ಉತ್ತರಪ್ರದೇಶದ ಭಾಜಪ ಸರಕಾರವು ಪ್ರಯತ್ನಿಸಬೇಕಿದೆ ! |
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಗಡಿ ಜಿಲ್ಲೆಗಳ ಜನಸಂಖ್ಯಾಶಾಸ್ತ್ರದ (Demographic) ಬದಲಾವಣೆಗಳ ಕುರಿತು ಅಧ್ಯಯನ ನಡೆಸಿ!
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!