(ಕಾರ್ಬನ್ ಡೇಟಿಂಗ್ ಪರೀಕ್ಷೆ ಎಂದರೆ ಯಾವುದೇ ಒಂದು ವಸ್ತುವಿನ ವಯಸ್ಸನ್ನು ಅಳೆಯುವುದು)

ವಾರಣಾಸಿ (ಉತ್ತರಪ್ರದೇಶ) – ಇಲ್ಲಿನ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ಗೆ ಸಂಬಂಧಿಸಿದ ಬೇಡಿಕೆಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವು ಅಕ್ಟೋಬರ್ ೧೧ ಕ್ಕೆ ಮುಂದೂಡಿದೆ. ಮುಸಲ್ಮಾನ ಪಕ್ಷವು ಬಗೆಗಿನ ತನ್ನ ಪರವನ್ನು ಪ್ರಸ್ತುತಪಡಿಸಿದ ನಂತರ ನ್ಯಾಯಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತ್ತೊಂದೆಡೆ, ಕಾರ್ಬನ್ ಡೇಟಿಂಗ್ನ ಕುರಿತು ಹಿಂದೂ ಪಕ್ಷಗಳ ನಡುವೆ ಎರಡು ಒಡಕು ನಿರ್ಮಾಣವಾಗಿವೆ. ೫ ಮಹಿಳಾ ಪಕ್ಷದ ಸದಸ್ಯರಲ್ಲಿ, ರಾಖಿ ಸಿಂಗ್ ಇವರು ಕಾರ್ಬನ್ ಡೇಟಿಂಗ್ ಅನ್ನು ವಿರೋಧಿಸಿದ್ದಾರೆ. ಕಾರ್ಬನ್ ಡೇಟಿಂಗ್ ಪರೀಕ್ಷೆಯ ಮೂಲಕ, ಶಿವಲಿಂಗವು ಎಷ್ಟು ಪ್ರಾಚೀನವಾಗಿದೆ, ಅದರ ಆಯುಷ್ಯ ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಅದರ ಆಧಾರದ ಮೇಲೆ ಜ್ಞಾನವಾಪಿ ಮೇಲಿನ ಹಿಂದೂಗಳ ಹಕ್ಕು ಪ್ರಬಲಗೊಳ್ಳುವ ಸಾಧ್ಯತೆಯಿದೆ.
#ScienceNotPolitics | Gyanvapi row: Varanasi court defers order on carbon dating of ‘Shivling’ to October 11 https://t.co/scL7Jk3jER
— Republic (@republic) October 7, 2022
ರಾಖಿ ಸಿಂಗ್ ಅವರ ನ್ಯಾಯವಾದಿ ಮನ ಬಹದ್ದೂರ್ ಸಿಂಗ್ ಇವರು, ‘ಕಾರ್ಬನ್ ಡೇಟಿಂಗ್ನಿಂದಾಗಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗವು ಭಗ್ನವಾಗುವುದು. ನಮ್ಮ ಸನಾತನ ಹಿಂದು ಧರ್ಮದಲ್ಲಿ ಭಗ್ನವಾಗಿರುವ ವಿಗ್ರಹಗಳನ್ನು ಪೂಜಿಸುವುದಿಲ್ಲ. ಆದ್ದರಿಂದ ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡಲೇಬಾರದು’ ಎಂದು ಹೇಳಿದರು. ಇತರ ೪ ಮಹಿಳಾ ಪಕ್ಷಗಳ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರ ಪ್ರಕಾರ, ಕಾರ್ಬನ್ ಡೇಟಿಂಗ್ ಮಾಡುವಾಗ ಜ್ಞಾನವಾಪಿಯನ್ನು ಮುಟ್ಟುವ ಅಗತ್ಯವೇ ಇಲ್ಲ. ಈ ಪರೀಕ್ಷೆಯನ್ನು ಅದನ್ನು ಸ್ಪರ್ಶಿಸದೆಯೂ ಮಾಡಬಹುದಾಗಿದೆ ಎಂದು ಹೇಳಿದರು.
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!