‘ರಾಜರಾಜ ಚೋಳ ಇವರ ಕಾಲದಲ್ಲಿ ಹಿಂದೂ ಹೆಸರಿನ ಯಾವುದೇ ಧರ್ಮ ಅಸ್ತಿತ್ವದಲ್ಲಿ ಇರಲಿಲ್ಲ !’ (ಅಂತೆ)

ನಾಯಕ ಕಮಲ ಹಾಸನ ಇವರ ಹುರುಳಿಲ್ಲದ ಶೋಧನೆ !

ನಾಯಕ ಕಮಲ ಹಾಸನ

ಚೆನ್ನೈ (ತಮಿಳುನಾಡು) – ರಾಜ ರಾಜ ಚೋಳ ಇವರ ಕಾಲದಲ್ಲಿ ‘ಹಿಂದೂ’ ಎಂಬ ಯಾವುದೇ ಧರ್ಮ ಅಸ್ತಿತ್ವದಲ್ಲಿ ಇರಲಿಲ್ಲ. ಆಗ ಕೇವಲ ವೈಷ್ಣವ್, ಶಿವಂ ಮತ್ತು ಸಮಾನಂ ಹೆಸರಿನ ಧರ್ಮ ಇತ್ತು. ಹಿಂದೂ ಶಬ್ದ ಬ್ರಿಟಿಷರು ತಂದಿದ್ದಾರೆ, ಎಂದು ದಕ್ಷಿಣ ಭಾರತದ ಪ್ರಸಿದ್ಧ ನಟ ಹಾಗೂ ರಾಜಕೀಯ ಪಕ್ಷದ ಮುಖಂಡ ಕಮಲ ಹಸನ ಇವರು ಹೇಳಿಕೆ ನೀಡಿದ್ದಾರೆ. ಇತ್ತಿಚೆಗೆ ಚೋಳ ವಂಶದ ರಾಜರ ಆಧಾರಿತ ತಮಿಳು ಚಲನಚಿತ್ರ ‘ಪೋನ್ನಿಯನ ಸೆಲ್ವನ್ – ೧’ ಬಿಡುಗಡೆಯಾಗಿದೆ. ಆ ಸಮಯದಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಸಿದ್ಧ ನಿರ್ದೇಶಕ ಮಣಿರತ್ನಂ ಇವರು ಈ ಚಲನಚಿತ್ರ ನಿರ್ಮಿಸಿದ್ದಾರೆ. ಕಮಲ ಹಸನ ಇವರ ಈ ಹೇಳಿಕೆಯ ನಂತರ ಅದರ ಬಗ್ಗೆ ವಿವಾದ ನಿರ್ಮಾಣವಾಯಿತು.

ಕಮಲ ಹಸನ ಇವರ ಮೊದಲು ತಮಿಳು ಚಲನಚಿತ್ರದ ನಿರ್ದೇಶಕ ವೇತ್ರಿ ಮಾರನ್ ಇವರು ಕೂಡ ‘ಚೋಳ ರಾಜ ಹಿಂದೂ ಆಗಿರಲಿಲ್ಲ’, ಎಂದು ಹೇಳಿದ್ದರು. ಅವರು, ನಮ್ಮ ಗುರುತು ಸತತವಾಗಿ ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ ಮತ್ತು ಅದರ ಕೇಸರೀಕರಣ ಮಾಡಲಾಗುತ್ತಿದೆ. ಚೋಳ ರಾಜನನ್ನು ಹಿಂದೂ ರಾಜ ಎಂದು ಹೇಳಲಾಗುತ್ತಿದೆ.

ಚೋಳ ರಾಜ ಹಿಂದೂವೇ ಆಗಿದ್ದರು ! – ಭಾಜಪ

ಭಾಜಪದ ನಾಯಕ ಹೆಚ್. ರಾಜಾ ಇವರು ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. ಅವರು, ರಾಜರಾಜಾ ಚೋಳ ಇವರು ಹಿಂದೂ ರಾಜರೆಯಾಗಿದ್ದರು. ನನಗೆ ವೆತ್ರಿಮಾರನ್ ಇವರ ಹಾಗೆ ಇತಿಹಾಸದ ಬಹಳಷ್ಟು ಮಾಹಿತಿ ಇದೆ ಹಾಗೆನೂ ಇಲ್ಲ, ಆದರೆ ರಾಜರಾಜಾ ಚೋಳ ಇವರು ಎರಡು ಚರ್ಚ್ ಮತ್ತು ಮಸೀದಿ ಕಟ್ಟಿಸಿದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಮಲ ಹಾಸನ ತಮ್ಮನ್ನು ಹಿಂದೂ ಎಂದುಕೊಳ್ಳುತ್ತಾರೆಯೇ ? ಇದೆ ಮುಖ್ಯ ಪ್ರಶ್ನೆಯಾಗಿದೆ ! ತಮಿಳುನಾಡಿನಲ್ಲಿ ಅನೇಕ ಜನರು ತಮ್ಮನ್ನು ಹಿಂದೂ ಅಂದುಕೊಳ್ಳದೆ ದ್ರಾವಿಡ ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಹಿಂದೂ ಶಬ್ದದ ಅರ್ಥ ಕೂಡ ತಿಳಿದೇ ಇರುವುದರಿಂದ ಈ ರೀತಿ ತಮ್ಮನ್ನು ತಾವೇ ಮೋಸ ಮಾಡಿಕೊಳ್ಳುತ್ತಾರೆ !
  • ಚೋಳ ವಂಶದ ರಾಜರಿಂದಲೇ ಭಾರತೀಯ ಸಂಸ್ಕೃತಿ ತಮಿಳುನಾಡಿನಲ್ಲಿ ಅಲ್ಲದೆ, ವಿಯೇತನಾಂ ಕಂಬೋಡಿಯ, ಮಲೇಶಿಯಾ, ಇಂಡೋನೇಶಿಯಾ ಮುಂತಾದ ದಕ್ಷಿಣ ಏಷ್ಯಾದ ದೇಶದಲ್ಲಿ ಆಡಳಿತ ನಡೆಸಿ ಬೆಳೆಸಿದರು ! ಇಂದಿಗೂ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಇದ್ದಾರೆ.