ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ದೇಹತ್ಯಾಗ

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನವ ದೆಹಲಿ – ಬದರಿ ನಾಥದಲ್ಲಿ ಜ್ಯೋತಿಷ ಮತ್ತು ದ್ವಾರಕಾದಲ್ಲಿ ಶಾರದಾ ಎಂಬ ಎರಡು ಪೀಠಗಳ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸೆಪ್ಟೆಂಬರ್ ೧೧ ರಂದು ಮಧ್ಯಾಹ್ನ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರ ದೇವಸ್ಥಾನದಲ್ಲಿ  ಅನಾರೋಗ್ಯದಿಂದ ೯೯ ನೆ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರ ೯೯ ನೇ ಹುಟ್ಟುಹಬ್ಬವನ್ನು ಸೆಪ್ಟೆಂಬರ್ ೩ ರಂದು ಆಚರಿಸಲಾಗಿತ್ತು. ಅವರು ಬ್ರಹ್ಮಲೀನರಾಗುವಾಗ ಅವರ ಅನೇಕ ಶಿಷ್ಯರು ಮತ್ತು ಭಕ್ತರು ಇದ್ದರು. ಶಂಕರಾಚಾರ್ಯರು ರಾಮಮಂದಿರ ಜೀರ್ಣೋದ್ಧಾರಕ್ಕಾಗಿ ನ್ಯಾಯಾಂಗ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಹಿಂದೂ ಧರ್ಮಕ್ಕಾಗಿ ಧಗಧಗಿಸುವ ಬ್ರಾಹ್ಮತೇಜದ ಜ್ವಾಲೆ ಶಾಂತವಾಯಿತು ! – ಸನಾತನ ಸಂಸ್ಥೆ

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮಹಾರಾಜರ ದೇಹತ್ಯಾಗದಿಂದ ಹಿಂದೂ ಧರ್ಮಕ್ಕಾಗಿ ಧಗಧಗಿಸುತ್ತಿದ್ದ ಬ್ರಾಹ್ಮತೇಜದ ಜ್ವಾಲೆಯು ಶಾಂತವಾಯಿತು, ಎಂದು ಭಾವಪೂರ್ಣ ಮಾತುಗಳಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರವರು ಶಂಕರಾಚಾರ್ಯರ ಚರಣಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅವರು ಧರ್ಮಸಾಮ್ರಾಟ ಕರಪಾತ್ರಿಸ್ವಾಮಿಯವರ ಶಿಷ್ಯೋತ್ತಮರಾಗಿ ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮದ ಪ್ರಚಾರ ಮತ್ತು ಧರ್ಮರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿದರು. ಆದಿ ಶಂಕರಾಚಾರ್ಯರ ಪರಂಪರೆಯ ಎರಡು ಪೀಠಗಳ ಶಂಕರಾಚಾರ್ಯರ ಪದವಿಯನ್ನು ಶ್ರದ್ಧೆಯಿಂದ ನಿಭಾಯಿಸಿದರು. ಅವರು ವಿವಿಧ ಹಿಂದೂ ಮತ್ತು ಆಧ್ಯಾತ್ಮಿಕ ಸಂಘಟನೆಗಳಿಗೆ ಆಧಾರಪುರುಷರಾಗಿದ್ದರು.

೨೦೧೫ ನೇ ಇಸವಿಯಲ್ಲಿ, ಕಾ. ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಮೇಲೆ ಆರೋಪಗಳಾದಾಗ ಸ್ವತಃ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ನಾಸಿಕನ ಕುಂಭಮೇಳದಲ್ಲಿ ಸನಾತನ ಸಂಸ್ಥೆಯು ನಿರಪರಾಧಿಯೆಂದು ಮಾಧ್ಯಮಗಳ ಮುಂದೆ ದೃಢವಾಗಿ ಮಂಡಿಸಿದ್ದರು. ಅಲ್ಲದೇ ಕಾಲಕಾಲಕ್ಕೆ ಸನಾತನ ಸಂಸ್ಥೆಯ ಕಾರ್ಯಕ್ಕೆ ಶುಭಾಶೀರ್ವಾದ ನೀಡಿ ಆಧ್ಯಾತ್ಮಿಕ ಬಲವನ್ನು ಪ್ರದಾನಿಸಿದ್ದರು, ಎಂದು ಶ್ರೀ. ರಾಜಹಂಸರವರು ಹೇಳಿದ್ದಾರೆ.