‘ಲವ್ ಜಿಹಾದ್’ ಎಂಬ ನಕಲಿ ಬಾಂಬ್‌ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುವುದು ಅಪರಾಧವಲ್ಲವೇ ?’(ಅಂತೆ)

ಕಾಂಗ್ರೆಸ್ ನಾಯಕ ಸಚಿನ್ ಸಾವಂತ್‌ನ ನುಡಿಮುತ್ತು !

ಸಚಿನ್ ಸಾವಂತ್

ಅಮರಾವತಿ – ಇಲ್ಲಿನ ರುಕ್ಮಿಣಿ ನಗರ ಪ್ರದೇಶದಿಂದ ನಾಪತ್ತೆಯಾಗಿದ್ದ ೧೯ ವರ್ಷದ ಯುವತಿ ಪತ್ತೆಯಾಗಿದ್ದಾಳೆ. ‘ಈಕೆ ಕೋಪಗೊಂಡು ಮನೆ ಬಿಟ್ಟು ಹೋಗಿದ್ದಳು’, ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದ ಕುರಿತು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಅವರು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಉದ್ದೇಶಿಸಿ, ‘ನೀವು ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡುವ ‘ಆಪ್’ ಅನ್ನು ಇಡಬಾರದು ಎಂದು ಪೊಲೀಸರ ನಿಯಮವಿದೆಯೇ ?’ ಇದನ್ನು ಎತ್ತಿ ಹಿಡಿಯಬೇಕು ಇಲ್ಲವೇ ಪೊಲೀಸರ ಗೌರವ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದರು. ‘ಲವ್ ಜಿಹಾದ್’ ಹೆಸರಿನಲ್ಲಿ ನಕಲಿ ಬಾಂಬ್ ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಹರಡಲು ಯತ್ನಿಸುವುದು ಅಪರಾಧವಲ್ಲವೇ ? ಹೀಗಿರುವಾಗ ಏಕೆ ಕ್ರಮಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.


ಈ ಹಿಂದೂ ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆಯವರು ರಾಜಪೇಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಈರುಳ್ಳಿ, ಆಲೂಗಡ್ಡೆ ಮಾರಾಟ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದಾದ ಬಳಿಕ ಸಂಸದ ನವನೀತ್ ರಾಣಾ, ಬಿಜೆಪಿ ಹಾಗೂ ಹಿಂದುತ್ವನಿಷ್ಠ ಸಂಘ ಸಂಸ್ಥೆಗಳು ‘ಲವ್ ಜಿಹಾದ್’ ಪ್ರಕರಣವಾಗಿ ಪ್ರತಿಭಟನೆ ನಡೆಸಿದ್ದವು.

ಸಂಪಾದಕೀಯ ನಿಲುವು

  • ಅಮರಾವತಿ ಜಿಲ್ಲೆಯಲ್ಲಿ ಇದುವರೆಗೆ ೩೦ ‘ಲವ್ ಜಿಹಾದ್’ ಪ್ರಕರಣಗಳು ನಡೆದಿವೆ; ಆದರೆ ಸಚಿನ್ ಸಾವಂತ್ ಅದರ ಬಗ್ಗೆ ಚಕಾರವೆತ್ತುವುದಿಲ್ಲ. ಮಹಾರಾಷ್ಟ್ರದಲ್ಲಿ ಹಲವು ‘ಲವ್ ಜಿಹಾದ್’ ಪ್ರಕರಣಗಳು ನಡೆದು ಹಿಂದೂ ಹೆಣ್ಣುಮಕ್ಕಳ ಬದುಕು ನಾಶವಾಗಿದ್ದರೂ ಸಚಿನ್ ಸಾವಂತ್ ಮೌನವಾಗಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್ ನ ‘ಅಜೆಂಡಾ’ ವಾಗಿದೆ !
  • ಪೋಷಕರ ದೂರಿನ ನಂತರ ಪೊಲೀಸರು ತಕ್ಷಣ ಹುಡುಗಿಯನ್ನು ಏಕೆ ಹುಡುಕಲಿಲ್ಲ ? ಸಂಸದ ನವನೀತ್ ರಾಣಾ ಮತ್ತು ಸಂಸದ ಡಾ. ಅನಿಲ್ ಬೋಂಡೆ ಇವರು ಹುಡುಗಿಯನ್ನು ಹುಡುಕಲು ಸಮಯ ಮಿತಿಯೊಂದಿಗೆ ಪ್ರತಿಭಟಿಸಿದ ನಂತರ, ಪೊಲೀಸರು ಅವಳನ್ನು ವಶಕ್ಕೆ ತೆಗೆದುಕೊಂಡರು. ಸದ್ಯದ ಪ್ರಕರಣ ‘ಲವ್ ಜಿಹಾದ್’ ಆಗಿರುವಾಗ ಪೊಲೀಸರು ಅದಕ್ಕೆ ಬೇರೆಯದೇ ಟ್ವಿಸ್ಟ್ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ !