
ಸಹಾರನಪೂರ (ಉತ್ತರಪ್ರದೇಶ) – ದೇವಬಂದನ ಶೇಖ-ಉಲ್-ಹಿಂದ ಕಾಲೋನಿಯಲ್ಲಿ ಪೊಲೀಸರು ಫೈಜಾನ ಹೆಸರಿನ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿ ಫೈಜಾನ, ಮಹಮ್ಮದ ಛೋಟನ ಮತ್ತು ಸುಫಿಯಾನ ಈ ಮೂವರು ಗೋವು ಕಳ್ಳಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಮತ್ತು ಒಬ್ಬ ಮಹಿಳೆ ಸಹಿತ ೩ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಈ ಮನೆಯಿಂದ ೫೦ ಕೆ.ಜಿ. ಗೋಮಾಂಸ ಮತ್ತು ಮಾಂಸ ಕೊಯ್ಯುವ ಶಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
50 Kg गोमांस के साथ देवबंद से 3 गौ तस्कर गिरफ्तार, महिला सहित 3 भागे: पहले से ही अपराधी है फैजान और मोहम्मद छोटन#Deoband #Beefhttps://t.co/wguHWQqdwC
— ऑपइंडिया (@OpIndia_in) August 28, 2022
ಬಂಧಿಸಲಾಗಿರುವವರಲ್ಲಿ ಛೋಟನ ಮೇಲೆ ಈಗಾಗಲೇ ೭ ಅಪರಾಧ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ೫ ಅಪರಾಧಗಳು ಗೋಹತ್ಯೆಗೆ ಸಂಬಂಧಿಸಿವೆ. ಅಲ್ಲದೇ ಅವನ ಮೇಲೆ ಗೂಂಡಾ ಕಾನೂನಿನ ಅಡಿಯಲ್ಲಿಯೂ ದೂರು ದಾಖಲಿಸಲಾಗಿದೆ. ಫೈಜಾನ ಮೇಲೆಯೂ ೭ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೪ ಗೋಹತ್ಯೆಯ ಸಂದರ್ಭದಲ್ಲಿವೆ. (ಇವರಿಬ್ಬರ ಮೇಲೆ ಈ ಹಿಂದೆಯೇ ಗೋಹತ್ಯೆಯ ದೂರು ಇದೆ. ಹೀಗಿರುವಾಗ ಅವರನ್ನು ಇಲ್ಲಿಯವರೆಗೆ ಕಠಿಣ ಶಿಕ್ಷೆ ಏಕೆ ಆಗಿಲ್ಲ ? ಒಂದು ವೇಳೆ ಅವರು ಸತತವಾಗಿ ಜಾಮೀನಿನ ಮೇಲೆ ಹೊರಗೆ ಬಂದು ಪದೇ ಪದೇ ಅದೇ ಅಪರಾಧವನ್ನೇ ಮಾಡುತ್ತಿದ್ದರೆ, ಗೋಹತ್ಯೆ ಎಂದಾದರೂ ನಿಲ್ಲ ಬಹುದೇ ? ಇಂತಹ ಕಾನೂನು ಮತ್ತು ನಿಯಮಗಳನ್ನು ಬದಲಾಯಿಸುವುದೇ ಸೂಕ್ತ ! – ಸಂಪಾದಕರು)
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲೂ ಈ ರೀತಿ ಅಪರಾಧಗಳು ನಡೆಯುತ್ತಿದ್ದರೆ, ಈ ಕಾನೂನಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಆರೋಪಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸರಕಾರವು ಪ್ರಯತ್ನಿಸುವುದು ಆವಶ್ಯಕವಾಗಿದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!