ಪೊಲೀಸರಿಂದ ಮುಸಲ್ಮಾನ ಯುವಕನ ಬಂಧನ

ಗೌಹಾಟಿ (ಆಸ್ಸಾಂ) – ಇಲ್ಲಿ ವಿವಾಹಿತ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವಳೊಂದಿಗೆ ಮದುವೆಯಾದನು. ತದನಂತರ ಅವಳನ್ನು ಬಲವಂತವಾಗಿ ಗೋಮಾಂಸವನ್ನು ಸೇವಿಸುವಂತೆ ಒತ್ತಾಯಿಸಿದಾಗ ಅವನನ್ನು ಬಂಧಿಸಲಾಗಿದೆ. ಅಬ್ದುಲ ಶಾಹಜಹಾನ ಅವನ ಹೆಸರಾಗಿದ್ದು, ಅವನು ‘ಮಿಂಟೂ ರಾಯ್’ ಎಂದು ಹಿಂದೂ ಹೆಸರು ಹೇಳಿ ಈ ಯುವತಿಯನ್ನು ಪ್ರೇಮದ ಬಲೆಯಲ್ಲಿ ಬೀಳಿಸಿದ್ದನು. ಅವರ ವಿವಾಹ ಪ್ರಸಿದ್ಧ ಕಾಮಾಖ್ಯ ಮಂದಿರದಲ್ಲಿ ಆಗಿತ್ತು. ೬ ತಿಂಗಳ ಬಳಿಕ ಈ ಯುವತಿಗೆ ಅವನ ನೈಜ ಗುರುತು ತಿಳಿಯಿತು. ಈ ಕಾಲದಲ್ಲಿ ಅವನು ಅವಳಿಂದ ಅವಳ ಹತ್ತಿರವಿದ್ದ ಎಲ್ಲ ಹಣವನ್ನು ಕಸಿದುಕೊಂಡನು ಮತ್ತು ಇನ್ನೊರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದನು.
ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು ! – ಸಂತ್ರಸ್ತ ಹಿಂದೂ ಯುವತಿ
ಈ ಘಟನೆಯ ವಿಷಯದಲ್ಲಿ ಈ ಯುವತಿಯು, ‘ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು’, ಎಂದು ನಾನು ಕರೆ ನೀಡಲು ಇಚ್ಛಿಸುತ್ತೇನೆ. ಅವರ ಬಲೆಯಲ್ಲಿ ಸಿಲುಕುವುದರಿಂದ ಜಾಗೃತವಾಗಿರಬೇಕು. ಅವರು(ಮುಸಲ್ಮಾನ ಪುರುಷರು) ಕೆಲವು ದಿನಗಳ ವರೆಗೆ ನಿಮ್ಮೊಂದಿಗೆ ಚೆನ್ನಾಗಿ ವರ್ತಿಸುತ್ತಾರೆ ಮತ್ತು ತದನಂತರ ನಿಮ್ಮನ್ನು ಶಾರೀರಿಕವಾಗಿ ಹಿಂಸಿಸುವರು. ಅಲ್ಲದೇ ನಿಮ್ಮ ಆಹಾರವನ್ನೂ ನಿಲ್ಲಿಸುವರು ಎಂದು ಹೇಳಿದಳು.
ಸಂಪಾದಕೀಯ ನಿಲುವುಲವ ಜಿಹಾದ್ ವಿರೋಧಿ ಕಾನೂನು ಜಾರಿಗೊಳಿಸಿದರೂ ಇಂತಹ ಪ್ರಕರಣಗಳು ನಿಲ್ಲುವುದಿಲ್ಲ. ಇದರಿಂದ ‘ಮತಾಂಧರಿಗೆ ಕಾನೂನಿನ ಭಯ ಇರುವುದಿಲ್ಲ’, ಎನ್ನುವುದು ಪುನಃ ಒಮ್ಮೆ ಸ್ಪಷ್ಟವಾಗಿದೆ. ಇಂತಹವರಿಗೆ ಈಗ ಹಿಂದೂ ಯುವತಿಯ ಜೀವನ ನಾಶವಾಗಿರುವ ಕಾರಣದಿಂದ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !