
ಭೋಂಡಸಿ (ಹರಿಯಾಣಾ) – ಸುಲಿಗೆಗಾಗಿ ಶಾಸಕರಿಗೆ ಕೊಲೆ ಬೆದರಿಕೆ ನೀಡಿದ ಪ್ರಕಾರದಲ್ಲಿ ಹರಿಯಾಣಾದ ಪೊಲೀಸರ ವಿಶೇಷ ಕಾರ್ಯ ದಳದ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ೪ ಶಾಸಕರಿಗೆ ಜೂನ್ ೨೪ ರಿಂದ ೨೮ ರ ಕಾಲಾವಧಿಯಲ್ಲಿ ಸಂಚಾರಿವಾಣಿಯ ಮೂಲಕ ಬೆದರಿಕೆ ನೀಡಲಾಗಿದೆ. ಪಾಕಿಸ್ತಾನದ ೧೦ ಜನರಿಂದ ಬೆದರಿಕೆ ಕರೆಗಳು ಬಂದಿದ್ದವು. ಬಂಧಿತರಲ್ಲಿ ದುಲೇಶ ಆಲಂ ಮತ್ತು ಬದರೆ ಆಲಂ ಇವರನ್ನು ಮುಂಬೈಯಿಂದ, ಹಾಗೂ ಅಮಿತ ಯಾದವ, ಸಾದಿಕ ಅನ್ವರ್, ಸನೋಜ ಕುಮಾರ, ಮತ್ತು ಕಾಶ ಆಲಂ ಇವರನ್ನು ಬಿಹಾರದ ಮುಜಪ್ಫರನಗರದಿಂದ ಬಂಧಿಸಲಾಗಿದೆ. ಇವರಿಂದ ೫೫ ಎಟಿಎಂ ಕಾರ್ಡ್, ೨೪ ಸಂಚಾರಿವಾಣಿಗಳು, ೫೬ ಸಿಮ್ ಕಾರ್ಡ್, ೨೨ ಪಾಸ್ ಬುಕ್ ಮತ್ತು ಚೆಕ್ ಬುಕ್, ೩ ಲಕ್ಷ ೯೭ ಸಾವಿರ ನಗದು, ಒಂದು ನಾಲ್ಕು ಚಕ್ರಗಳ ವಾಹನ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಕುಶಲ ಅಪರಾಧಿಗಳು. ಆದರೆ ಅವರಿಗೆ ಭಯೋತ್ಪಾದಕ ಸಂಘಟನೆ ಜೊತೆ ಸಂಬಂಧವಿಲ್ಲ. ಭಾರತದ ಜೊತೆಗೆ ಪಾಕಿಸ್ತಾನ ಮತ್ತು ಪಶ್ಚಿಮ ಏಷಿಯಾದ ಕೆಲವು ದೇಶದಲ್ಲಿ ಅವರ ಸಹಚರರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Death threats, extortion calls to Haryana MLAs: Gang of criminals busted, 6 held https://t.co/131q7FQSUE
— Hindustan Times (@HindustanTimes) July 31, 2022
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿಯೂ ಇದ್ದಾರೆ ಅಪರಾಧಿಗಳ ಸಹಚರರು ! |
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide