
ಭೋಂಡಸಿ (ಹರಿಯಾಣಾ) – ಸುಲಿಗೆಗಾಗಿ ಶಾಸಕರಿಗೆ ಕೊಲೆ ಬೆದರಿಕೆ ನೀಡಿದ ಪ್ರಕಾರದಲ್ಲಿ ಹರಿಯಾಣಾದ ಪೊಲೀಸರ ವಿಶೇಷ ಕಾರ್ಯ ದಳದ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ೪ ಶಾಸಕರಿಗೆ ಜೂನ್ ೨೪ ರಿಂದ ೨೮ ರ ಕಾಲಾವಧಿಯಲ್ಲಿ ಸಂಚಾರಿವಾಣಿಯ ಮೂಲಕ ಬೆದರಿಕೆ ನೀಡಲಾಗಿದೆ. ಪಾಕಿಸ್ತಾನದ ೧೦ ಜನರಿಂದ ಬೆದರಿಕೆ ಕರೆಗಳು ಬಂದಿದ್ದವು. ಬಂಧಿತರಲ್ಲಿ ದುಲೇಶ ಆಲಂ ಮತ್ತು ಬದರೆ ಆಲಂ ಇವರನ್ನು ಮುಂಬೈಯಿಂದ, ಹಾಗೂ ಅಮಿತ ಯಾದವ, ಸಾದಿಕ ಅನ್ವರ್, ಸನೋಜ ಕುಮಾರ, ಮತ್ತು ಕಾಶ ಆಲಂ ಇವರನ್ನು ಬಿಹಾರದ ಮುಜಪ್ಫರನಗರದಿಂದ ಬಂಧಿಸಲಾಗಿದೆ. ಇವರಿಂದ ೫೫ ಎಟಿಎಂ ಕಾರ್ಡ್, ೨೪ ಸಂಚಾರಿವಾಣಿಗಳು, ೫೬ ಸಿಮ್ ಕಾರ್ಡ್, ೨೨ ಪಾಸ್ ಬುಕ್ ಮತ್ತು ಚೆಕ್ ಬುಕ್, ೩ ಲಕ್ಷ ೯೭ ಸಾವಿರ ನಗದು, ಒಂದು ನಾಲ್ಕು ಚಕ್ರಗಳ ವಾಹನ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಕುಶಲ ಅಪರಾಧಿಗಳು. ಆದರೆ ಅವರಿಗೆ ಭಯೋತ್ಪಾದಕ ಸಂಘಟನೆ ಜೊತೆ ಸಂಬಂಧವಿಲ್ಲ. ಭಾರತದ ಜೊತೆಗೆ ಪಾಕಿಸ್ತಾನ ಮತ್ತು ಪಶ್ಚಿಮ ಏಷಿಯಾದ ಕೆಲವು ದೇಶದಲ್ಲಿ ಅವರ ಸಹಚರರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Death threats, extortion calls to Haryana MLAs: Gang of criminals busted, 6 held https://t.co/131q7FQSUE
— Hindustan Times (@HindustanTimes) July 31, 2022
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿಯೂ ಇದ್ದಾರೆ ಅಪರಾಧಿಗಳ ಸಹಚರರು ! |
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ