ಆಡಳಿತಾರೂಢ ಜಾರ್ಖಂಡ ಮುಕ್ತಿ ಮೋರ್ಚಾದ ಸ್ಥಳೀಯ ನಾಯಕ ಅಕ್ಬರ್ ಖಾನ್ನಿಂದ ಶಾಲೆಗೆ ನುಗ್ಗಿ ಹಿಂದೂ ಶಿಕ್ಷಕರಿಗೆ ಥಳಿತ !
ಪೊಲೀಸರಿಂದ ಅಪರಾಧ ದಾಖಲಿಸ ನಿರಾಕರಣೆ ಹಾಗೂ ನಂತರ ನಮಾಜ್ನ ಬಗ್ಗೆ ಉಲ್ಲೇಖಿಸದೇ ಅಪರಾಧ ದಾಖಲು !

ಸಿಂಹಭೂಮ್ (ಜಾರ್ಖಂಡ್) – ಇಲ್ಲಿಯ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಳೀಯ ನಾಯಕ ಅಕ್ಬರ್ ಖಾನ್ನು ಶುಕ್ರವಾರ ಗೋಯಿಲ್ಕೆರಾ ಪ್ರದೇಶದ ಸರಕಾರಿ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೋಗಲು ಬಿಡಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ಎದುರೇ ಶಿಕ್ಷಕ ರಾಮೇಂದ್ರ ದುಬೆಗೆ ಥಳಿಸಿದ್ದಾನೆ. ಈ ಬಗ್ಗೆ ದುಬೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ಅಕ್ಬರ್ ಖಾನ್ ಅವರು ಆಡಳಿತ ಪಕ್ಷದ ನಾಯಕರಾಗಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದರು; ಆದರೆ ಮರುದಿನ ಅಪರಾಧ ದಾಖಲಿಸಿದ್ದಾರೆ. ಅಪರಾಧವನ್ನು ದಾಖಲಿಸಲು, ಪೊಲೀಸರು ದುಬೆಯಿಂದ ಎರಡನೆ ಬರಿ ದೂರನ್ನು ದಾಖಲಿಸಿಕೊಂಡರು ಮತ್ತು ಅದರಿಂದ ನಮಾಜ್ನ ಉಲ್ಲೇಖವನ್ನು ತೆಗೆದುಹಾಕಿದರು. ದುಬೆಯವರು ಅಕ್ಬರ್ ಖಾನ್ ನಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿ ರಕ್ಷಣೆ ಕೋರಿದ್ದಾರೆ. ಖಾನ್ ಅವರು ರಾಜ್ಯ ಸಚಿವ ಜೋಬಾ ಮಾಂಝಿ ಅವರಿಗೆ ಆಪ್ತರು ಎಂದು ದುಬೆಯವರು ಹೇಳಿದ್ದಾರೆ
೧. ನಾನು ಯಾವತ್ತೂ ಮಕ್ಕಳನ್ನು ನಮಾಜ್ಗೆ ಹೋಗದಂತೆ ಒತ್ತಡ ಹೇರಿಲ್ಲ; ಆದರೆ ಇನ್ನೂ ನಮಾಜ್ಗೆ ಹೋಗಲು ಬಿಡಲಿಲ್ಲ ಎಂದು ಹುಡುಗರು ಹೇಳಿದ್ದರು ಎಂದು ಅಕ್ಬರ್ ಖಾನ್ ಹೇಳಿದ್ದಾರೆಂದು ದುಬೆಯವರು ತಿಳಿಸಿದ್ದಾರೆ
೨. ಅಕ್ಬರ್ ಖಾನ್ ಈ ಕುರಿತು, ಥಳಿಸಿದ ಘಟನೆ ನಡೆದಿಲ್ಲ. ರಾಜಕೀಯ ಪಿತೂರಿಯಿಂದ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಆಡಳಿತ ಪಕ್ಷದ ನಾಯಕರ ಗೂಂಡಾಗಿರಿ ! ಓರ್ವ ಶಿಕ್ಷಕರಿಗೆ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮುಂದೆ ಥಳಿಸಲು ಇಷ್ಟು ಧೈರ್ಯ ಹೇಗೆ ಬರುತ್ತದೆ ? ಈ ಬಗ್ಗೆ ಜಾತ್ಯತೀತ ಸಂಘಟನೆಗಳು, ಪಕ್ಷಗಳು ಬಾಯಿ ತೆರೆಯುತ್ತವೆಯೇ ? |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ