
ಅಜಮೇರ (ರಾಜಸ್ಥಾನ) – ಹಿಂದೂಗಳ ದೇವತೆಗಳ ವಿರುದ್ಧ ನೀಡಲಾಗುವ ಹೇಳಿಕೆಗಳನ್ನು ವಿರೋಧಿಸಲು ಇಲ್ಲಿ ಹಿಂದೂಗಳು ಶಾಂತಿಯ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ ಮಹಿಳಾ ಸಂತರೂ ಉಪಸ್ಥಿತರಿದ್ದರು. ಇದರೊಂದಿಗೆ ಭಾಜಪದ ಸ್ಥಳೀಯ ಶಾಸಕರಾದ ಅನಿತಾ ಭದೆಲರವರೂ ಸಹಭಾಗಿಯಾಗಿದ್ದರು. ಈ ಸಮಯದಲ್ಲಿ ನೂಪುರ ಶರ್ಮಾರವರನ್ನು ಸಮರ್ಥಿಸಲಾಯಿತು. ಮೆರವಣಿಗೆಯ ಸುರಕ್ಷೆಗಾಗಿ ೨೦ ಪೊಲೀಸ ಅಧಿಕಾರಿಗಳು ಹಾಗೂ ೧ ಸಾವಿರ ಪೊಲೀಸ ಪೇದೆಗಳನ್ನೂ ನೇಮಿಸಲಾಗಿತ್ತು. ಮೆರವಣಿಗೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಒಯ್ಯಲಾಯಿತು. ಇಲ್ಲಿ ಕೊನೆಯಲ್ಲಿ ಹನುಮಾನ ಚಾಲಿಸಾದ ಪಠಣ ಮಾಡಲಾಯಿತು. ಅನಂತರ ಜಿಲ್ಲಾಧಿಕಾರಿಗಳ ಬಳಿ ರಾಷ್ಟ್ರಪತಿಗಳಿಗೆ ನೀಡಲು ಮನವಿಯನ್ನು ನೀಡಲಾಯಿತು.
देवी-देवताओं के अपमान के विरोध में हिन्दू समाज की ओर से शांति मार्च निकाला गया, एक हजार से ज्यादा पुलिस के जवान तैनात रहेhttps://t.co/5RiGcgpbA5 #RajasthanNews
— Dainik Bhaskar (@DainikBhaskar) June 26, 2022
೧. ಮಹಿಳಾ ಸಂತರು ‘ನಮ್ಮ ಹೆಣ್ಣುಮಕ್ಕಳು ‘ಲವ್ ಜಿಹಾದ’ಗೆ ಬಲಿಯಾಗುತ್ತಿದ್ದಾರೆ. ಅವರಿಗೆ ಬೆದರಿಕೆ ಹಾಕಿ ಕೊಲ್ಲಲಾಗುತ್ತಿದೆ, ಅವರ ಮೇಲೆ ಆಮ್ಲಗಳನ್ನು ಎಸೆಯಲಾಗುತ್ತಿದೆ. ಇದನ್ನೇ ವಿರೋಧಿಸಲು ನಾವು ಈ ಮೆರವಣಿಗೆಯನ್ನು ನಡೆಸುತ್ತಿದ್ದೇವೆ’ ಎಂದು ಹೇಳಿದರು.
೨. ಭಾಜಪದ ಶಾಸಕಿಯಾಗದ ಅನಿತಾ ಭದೆಲರವರು ಮಾತನಾಡುತ್ತ, ಹಿಂದೂ ಸಮಾಜವು ಯಾವಾಗಲೂ ಸದ್ಭಾವನೆಯಿಂದ ಇರುತ್ತದೆ, ಆದುದರಿಂದ ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಬಾರದು’ ಎಂದು ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳು ಸಂಘಟಿತರಾಗಿ ಮೆರವಣಿಗೆಯನ್ನು ನಡೆಸಿರುವುದು ಅಭಿನಂದನಾರ್ಹವಾಗಿದೆ; ಆದರೂ ಇಂತಹ ಮೆರವಣಿಗೆಗಳನ್ನು ನಡೆಸಿ ಹಿಂದೂ ದೇವತೆಗಳ ಅಪಮಾನವನ್ನು ತಡೆಯಲು ಸಾಧ್ಯವಿಲ್ಲದಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅತ್ಯಂತ ಆವಶ್ಯಕವಾಗಿದೆ ! |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ