
ಭಾಗ್ಯನಗರ(ತೆಲಂಗಾಣ) – ಇಲ್ಲಿಯ ಸಂರಕ್ಷಣಾ ಸಂಶೋಧನೆ ಮತ್ತು ವಿಕಾಸ ಪ್ರಯೋಗಶಾಲೆಯಲ್ಲಿ (ಡಿ ಆರ್ ಡಿ ಎಲ್) ಇಂಜಿನಿಯರ್ ಮಲ್ಲಿಕಾರ್ಜುನ ರೆಡ್ಡಿ ಇವನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ರೆಡ್ಡಿ ಪಾಕಿಸ್ತಾನದ ಮಹಿಳೆಯ ಪ್ರೇಮದ ಬಲೆಯಲ್ಲಿ ಸಿಲುಕಿದ್ದರು. ಈ ಮಹಿಳೆಯು ರೆಡ್ಡಿ ಇವರನ್ನು ವಿವಾಹ ಮಾಡಿಕೊಳ್ಳುವ ವಚನ ನೀಡಿ ಅವರಿಂದ ಕ್ಷಿಪಣಿ ವಿಕಾಸದ ಸಂಬಂಧಿತ ಅನೇಕ ಸೂಕ್ಷ್ಮ ಮಾಹಿತಿ ತಿಳಿದುಕೊಂಡಿದ್ದಳು. ರೆಡ್ಡಿ ಅನೇಕ ತಿಂಗಳುಗಳಿಂದ ಈ ಮಹಿಳೆಯ ಸಂಪರ್ಕದಲ್ಲಿದ್ದರು. ಈ ಮಹಿಳೆಯು ರೆಡ್ಡಿಯವರಿಗೆ ತನ್ನ ಪರಿಚಯ ಭಾರತೀಯ ನಾಗರೀಕವೆಂದು ಮಾಡಿಕೊಟ್ಟಿದ್ದಳು, ಹಾಗೂ ಆಕೆಯ ಹೆಸರು ನತಾಶ ರಾವ ಎಂದು ಹೇಳಿದ್ದಳು.
Hyderabad police arrest honey-trapped DRDL employee for leaking confidential Missile development information to Pakistan’s ISI operative through social media https://t.co/ovvojYJcfy
— OpIndia.com (@OpIndia_com) June 18, 2022
ಸಂಪಾದಕೀಯ ನಿಲುವು* ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ. |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ