VIDEO: ತುರ್ತು ಪರಿಸ್ಥಿತಿಯಲ್ಲಿ, ಹಿಂದೂ ಸಮಾಜದ ಎಲ್ಲಾ ವರ್ಗಗಳು ಒಂದಾಗಿ ಹಿಂದೂಗಳ ರಕ್ಷಣೆಗಾಗಿ ಕಾರ್ಯ ಮಾಡಬೇಕು ! – ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮುಂಬರುವ ಭೀಕರ ವಿಪತ್ತಿನಲ್ಲಿ ಹಿಂದುತ್ವನಿಷ್ಠರನ್ನು ಮತ್ತು ಸಾಧಕರನ್ನು ಸಾತ್ತ್ವಿಕ ಹಿಂದೂಗಳನ್ನು ಎಲ್ಲ ರೀತಿಯಿಂದ ರಕ್ಷಿಸುವುದು ಮುಖ್ಯ ಕಾರ್ಯವಾಗಿರಲಿದೆ. ಆಪತ್ಕಾಲದಲ್ಲಿ ಸಿಲುಕಿದ ಸಜ್ಜನ ಹಿಂದೂಗಳಿಗೆ ಎಲ್ಲ ರೀತಿಯ ಸಹಾಯ ಮಾಡಬೇಕು. ಈ ಎಲ್ಲಾ ಕಾರ್ಯಗಳು ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿಗೆ ಸೇರಿದ್ದಲ್ಲ. ಆಪತ್ಕಾಲದಲ್ಲಿ ಹಿಂದೂ ಸಮಾಜದ ಎಲ್ಲಾ ವರ್ಗದವರು ಒಂದಾಗಿ ಹಿಂದೂಗಳ ರಕ್ಷಣೆಗೆ ಶ್ರಮಿಸಬೇಕು. ಹಾಗೆ ಮಾಡುವುದರಿಂದ ಸಾಮಾಜಿಕ ಋಣವನ್ನು ತೀರಿಸಿದಂತಾಗುತ್ತದೆ ಮತ್ತು ನಮ್ಮ ಸಾಧನೆಯೂ ಆಗುತ್ತದೆ. ಈ ವಿಪತ್ತಿನಲ್ಲಿಯ ದುರಂತದ ನಷ್ಟದಿಂದ ಕೆಲವರು ದುಃಖಿತರಾಗಬಹುದು, ಇನ್ನು ಕೆಲವರಿಗೆ `ಈ ನಷ್ಟವನ್ನು ತಡೆಯಲು ದೇವರು ಏನಾದರೂ ಮಾಡಲಿಕ್ಕಿಲ್ಲವೇ?’ ಎಂದು ಪ್ರಶ್ನೆ ಬೀಳಬಹುದು. ಈ ದುರಂತವು ಜಗತ್ತಿನಲ್ಲಿ ಈಶ್ವರೀ ರಾಜ್ಯದ ಸ್ಥಾಪನೆಗೆ ದೈವಿಕವಾಗಿ ಯೋಜಿಸಿದ ಯೋಜನೆಯಾಗಿದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಪೃಥ್ವಿಯ ಮೇಲಿನ ರಜ-ತಮ ಭಾರವನ್ನು ಕಡಿಮೆ ಮಾಡಿ ಸಾತ್ತ್ವಿಕ ಗುಣದ ಪ್ರಾಬಲ್ಯವನ್ನು ಸೃಷ್ಟಿಸಲು ಈಶ್ವರನು ಯೋಜಿಸಿದ ಕ್ರಮವಾಗಿದೆ; ಅಂದರೆ ಸಜ್ಜನರ ದೃಷ್ಠಿಯಿಂದ ಈ ಆಪತ್ಕಾಲವು ಇಷ್ಟಾಪತ್ತಿಯಂತಾಗಿದೆ. ಹಾಗಾಗಿ ಆಪತ್ತು ಯೋಗ್ಯವೋ ಅಯೋಗ್ಯವೋ ಎನ್ನುವುದನ್ನು ಲೆಕ್ಕಿಸದೆ ಈ ವಿಪತ್ತಿನಿಂದ ಪಾರಾಗಿ ಹಿಂದೂಗಳ ರಕ್ಷಣೆಗೆ ಶ್ರಮಿಸಿ ಈಶ್ವರನ ಕೃಪೆಗೆ ಪಾತ್ರರಾಗಲು ಅವಕಾಶವಿದೆ’, ಎಂದು ಹಿಂದೂ ಸಮಾಜ ಯೋಚಿಸಬೇಕು’ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಅವರು ಹೇಳಿದರು. `ಸನಾತನ ಸಂಸ್ಥೆಯ ಕರೆ ! : `ಹಿಂದೂ ಸಮಾಜವು ಆಪತ್ಕಾಲದ ಸಿದ್ಧತೆ ಮಾಡುವುದು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

(ಸೌಜನ್ಯ : Hindu Janajagruti Samiti)