ಪ್ರಯಾಗರಾಜ(ಉತ್ತರ ಪ್ರದೇಶ) ದಲ್ಲಿರುವ ಪ್ರಾಚೀನ ಶಿವಮಂದಿರದಲ್ಲಿ ಶಿವಲಿಂಗದ ಮೇಲೆ ಮೊಟ್ಟೆ ಇಟ್ಟ ದುಷ್ಕರ್ಮಿ!

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಪ್ರಯಾಗರಾಜ(ಉತ್ತರಪ್ರದೇಶ)- ಇಲ್ಲಿಯ ಶಿವಕುಟಿ ಭಾಗದ ಕೊಟೇಶ್ವರ ಈ ಶಿವಮಂದಿರದ ಶಿವಲಿಂಗದ ಮೇಲೆ ದುಷ್ಕರ್ಮಿಯು ಮೊಟ್ಟೆಯನ್ನು ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ಇದರ ಛಾಯಾಚಿತ್ರವನ್ನು ತೆಗೆದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಅಜ್ಞಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ಥಳೀಯ ನಗರಸೇವಕ ಕಮಲೇಶ ಇವರು ಮಾತನಾಡುತ್ತಾ, ಈ ಮಂದಿರವನ್ನು ಪ್ರತ್ಯಕ್ಷ ಭಗವಾನ ಶ್ರೀರಾಮನೇ ಸ್ಥಾಪಿಸಿದ್ದಾನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

* ಪೈಗಂಬರರ ತಥಾಕಥಿತ ಅಪಮಾನದಿಂದ ಮುಸಲ್ಮಾನರು ಹಿಂಸಾಚಾರ ನಡೆಸುತ್ತಾರೆ, ಆದರೆ ಹಿಂದೂಗಳು ಅವರ ದೇವತೆಗಳಿಗೆ ಅಪಮಾನವನ್ನು ನ್ಯಾಯೋಚಿತ ಮಾರ್ಗದಿಂದಲೂ ವಿರೋಧಿಸುವುದಿಲ್ಲ!