ಇಸ್ಲಾಮೀ ರಾಷ್ಟ್ರಗಳಿಂದ ಭಾರತಕ್ಕಾಗುವ ವಿರೋಧದ ಹಿಂದೆ ಓಮಾನ ಪ್ರಮುಖ ಧರ್ಮಗುರುಗಳ ಕೈವಾಡ !

ಒಮಾನಿನ ಮುಖ್ಯ ಗುರು ಮುಫ್ತಿ ಶೇಖ ಅಹ್ಮದ ಬಿನ ಹಮದ ಅಲ-ಖಲೀಲಿ

ನವ ದೆಹಲಿ – ನೂಪುರ ಶರ್ಮಾ ಪ್ರಕರಣದಲ್ಲಿ ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಇಸ್ಲಾಮಿಕ ರಾಷ್ಟ್ರಗಳು ಆರಂಭಿಸಿವೆ. ಇದ್ರ ಹಿಂದೆ ಒಮಾನಿನ ಮುಖ್ಯ ಗುರು ಮುಫ್ತಿ ಶೇಖ ಅಹ್ಮದ ಬಿನ ಹಮದ ಅಲ-ಖಲೀಲಿ (ವಯಸ್ಸು ೭೯ ವರ್ಷ) ಇವರ ಕೈವಾಡವಿದೆ. ಅಲ-ಖಲೀಲಿ ಬಿಜೆಪಿಯ ವಿರೋಧದಲ್ಲಿ ಟ್ವೀಟ್ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಖಲೀಲಿ ಪಾಕಿಸ್ತಾನದ ಬೆಂಬಲಿಗರು. ಪಾಕಿಸ್ತಾನವು ಅವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವಾದ ನಿಶಾನ-ಎ- ಪಾಕಿಸ್ತಾನವನ್ನು ನೀಡಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ ವಿಜಯ ಸಾಧಿಸಿದ್ದಕ್ಕಾಗಿ ಅವರು ತಾಲಿಬಾನಿಗಳನ್ನು ಅಭಿನಂದಿಸಿದ್ದರು. ಇದರೊಟ್ಟಿಗೆ ಓಮಾನಿನಲ್ಲಿ ಮದ್ಯವನ್ನು ನಿಷೇಧಿಸುವಂತೆ ಅವರು ತಮ್ಮ ಸರಕಾರಕ್ಕೆ ಕರೆ ನೀಡಿದ್ದರು. ನೂಪುರ ಶರ್ಮಾ ಪ್ರಕರಣದಲ್ಲಿ ಖಲೀಲಿ “ಇದು ಇಸ್ಲಾಮಿಕ ರಾಷ್ಟ್ರಗಳು ಧ್ವನಿ ಎತ್ತಬೇಕಾದ ವಿಷಯವಾಗಿದೆ” ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಇಸ್ಲಾಮಿಕ ದೇಶಗಳು ತಮ್ಮ ಪ್ರಮುಖ ಧಾರ್ಮಿಕ ಗುರುಗಳ ಮಾತನ್ನು ಕೇಳುತ್ತವೆ ಮತ್ತು ಅದರಂತೆ ನಡೆದುಕೊಳ್ಳುತ್ತವೆ. ಆದರೆ ಭಾರತದಲ್ಲಿ ಹಿಂದೂ ಆಡಳಿತಗಾರರು ನಾಸ್ತಿಕರು, ಪುರೋ(ಅಧೊ)ಗಾಮಿ, ಎಡಪಂಥೀಯರ, ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳು ಇತ್ಯಾದಿಗಳ ಮಾತನ್ನು ಆಲಿಸಿ ನಂತರ ಹಿಂದೂ ಸಂತರನ್ನು ಮತ್ತು ಶಂಕರಾಚಾರ್ಯರನ್ನು ಸುಳ್ಳು ಆರೋಪಗಳ ಆಧಾರದ ಮೇಲೆ ಜೈಲಿನಲ್ಲಿ ಹಾಕುತ್ತಾರೆ.