
ಚೆನ್ನೈ : ಪೊನಾಮಲ್ಲೆ ಪಟ್ಟಣದ ಬಳಿ ೫೦೦ ವರ್ಷಗಳಷ್ಟು ಹಳೆಯದಾದ ಹಸಿರು ಕಲ್ಲಿನಿಂದ ತಯಾರಿಸಿದ ವಿಗ್ರಹವನ್ನು ಪೊಲೀಸರ ‘ವಿಗ್ರಹ ಇಲಾಖೆ’ ವಶಪಡಿಸಿಕೊಂಡಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತವಾಚಲಂ ಮತ್ತು ಬಕಿಯಾರಾಜ ಎಂಬಿಬ್ಬರನ್ನು ಬಂಧಿಸಿದೆ. ಸಂಶೋಧಕರ ಪ್ರಕಾರ, ಪಂಚಮುಖವಿರುವ ಇದು ಶಿವನ ಏಕೈಕ ವಿಗ್ರಹವಾಗಿದೆ. ಈ ವಿಗ್ರಹವು ನೇಪಾಳದ ದೇವಾಲಯದಿಂದ ಬಂದಿದೆ ಎಂದು ನಂಬಲಾಗಿದೆ ಎಂದು ಹೇಳಿದರು.
The idol wing officials, based on a tip-off about smugglers trying to sell the greenstone shivling with metalwork, began an operation to nab them and retrieve the #antique idol.#TamilNadu | @Akshayanath https://t.co/xODgr6U5XR
— IndiaToday (@IndiaToday) May 18, 2022
ಕೆಲವರು ಒಂದು ಪುರಾತನ ವಿಗ್ರಹವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಬಲೆ ಬೀಸಿದ್ದರು. ಪುರಾತನ ವಸ್ತುಗಳ ಸಂಗ್ರಾಹಕರಂತೆ ನಟಿಸಿದ ಪೊಲೀಸರು ಶಂಕಿತ ಮಾರಾಟಗಾರರನ್ನು ಸಂಪರ್ಕಿಸಿ ವಿಗ್ರಹದ ಖರೀದಿಗೆ ಬೆಲೆಯನ್ನು ನಿಗದಿಪಡಿಸಿದ ನಂತರ ಶಂಕಿತರು ವಿಗ್ರಹವನ್ನು ತೋರಿಸಲು ಮುಂದಾದರು. ಈ ಬಲೆಯಲ್ಲಿ ವಿಗ್ರಹ ಕಳ್ಳಸಾಗಾಣಿಕೆದಾರರು ಸಿಕ್ಕಿಬಿದ್ದರು. ವಿಗ್ರಹ ಮಾರಾಟದ ಹಿಂದೆ ಬೇರೆಯವರ ಕೈವಾಡವಿದೆ ಎಂದು ಪೊಲೀಸರಿಗೆ ಅನುಮಾನವಿದೆ. ತಮಿಳುನಾಡು ಪೊಲೀಸರ ‘ವಿಗ್ರಹ ವಿಭಾಗ’ ಇದುವರೆಗೆ ರಾಜ್ಯದಲ್ಲಿ ಕಳ್ಳಸಾಗಣೆದಾರರಿಂದ ಹಲವಾರು ಪುರಾತನ ವಿಗ್ರಹಗಳನ್ನು ವಶಪಡಿಸಿಕೊಂಡಿದೆ. ತಮಿಳುನಾಡಿನಿಂದ ವಿದೇಶಗಳಿಗೆ ಮಾರಾಟವಾಗಿದ್ದ ಪುರಾತನ ವಿಗ್ರಹಗಳನ್ನು ಮರಳಿ ತಂದು ಇಲ್ಲಿನ ದೇವಸ್ಥಾನಗಳಲ್ಲಿ ಪುನರ್ ಪ್ರತಿಷ್ಠಾಪಿಸಿದ್ದಾರೆ. (ಇಂತಹ ಪೋಲೀಸರು ಎಲ್ಲೆಡೆ ಬೇಕು ! – ಸಂಪಾದಕರು)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !