ಕೇವಲ ಶೇ. ೧೫ರಷ್ಟು ಕಲ್ಲುಗಳು ಲಭ್ಯ

ಜಯಪುರ (ರಾಜಸ್ಥಾನ) – ಅಯೊಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರಕ್ಕೆ ಗುಲಾಬಿ ಕಲ್ಲಿನ ಕೊರತೆಯುಂಟಾಗಿದೆ.
೧. ಈ ಕುರಿತು ಮಾಹಿತಿ ನೀಡಿದ ‘ಶ್ರೀರಾಮ ಜನ್ಮಭೂಮಿ ತಿರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಅವರು, ಮಂದಿರಕ್ಕೆ ೪ ಲಕ್ಷ ೭೦ ಸಾವಿರ ಘನ ಅಡಿ ಗುಲಾಬಿ ಕಲ್ಲುಗಳು ಬೇಕಾಗಿವೆ. ಇಲ್ಲಿಯವರೆಗೆ ೭೦ ಸಾವಿರ ಘನ ಅಡಿ ಅಂದರೆ ಕೇವಲ ಶೇ. ೧೫ ರಷ್ಟು ಕಲ್ಲುಗಳು ಅಯೋಧ್ಯೆಯನ್ನು ತಲುಪಿವೆ. ಗಣಿ ಇಲಾಖೆ ಗುತ್ತಿಗೆ ಪಡೆದಿರುವ ೪೧ ಗಣಿಗಳ ಪೈಕಿ ೧೪ ಗಣಿಗಳಲ್ಲಿ ಮಾತ್ರ ಗುಲಾಬಿ ಕಲ್ಲುಗಳಿವೆ ಎಂದು ಹೇಳಿದರು.
೨. ಕೊರತೆಗೆ ವಿವಿಧ ಕಾರಣಗಳನ್ನು ಹೇಳಲಾಗಿದೆ. ಅದರಲ್ಲಿ ಹರಾಜಾಗಿರುವ ೪೧ ಗಣಿಗಳಲ್ಲಿ ಜೂನ ೧೫ರ ಮೊದಲು ಅಗೆಯುವುದು ಕಷ್ಟಕರವಾಗಿದೆ. ಗಣಿ ಗುತ್ತಿಗೆ ಪಡೆದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ನಂತರ ೧೦ ರಿಂದ ೧೫ ದಿನಗಳು ಸಿದ್ಧತೆಗಾಗಿ ತಗಲುತ್ತದೆ. ೧೫ ದಿನಗಳ ಅಗೆದ ನಂತರ ಮಳೆ ಪ್ರಾರಂಭವಾಗುತ್ತದೆ. ಹೀಗಾಗಿ ದೀಪಾವಳಿಯ ನಂತರವೇ ಈ ಕಾಮಗಾರಿ ಆರಂಭವಾಗಲಿದೆ. ೧೪ ಗಣಿಗಳಲ್ಲಿ ಮಾತ್ರ ‘ಎ’ ದರ್ಜೆಯ ಗುಲಾಬಿ ಕಲ್ಲುಗಳಿವೆ. ಹಗಲು ರಾತ್ರಿ ಅಗೆದರೂ ಕಲ್ಲುಗಳನ್ನು ಪೂರೈಸಲು ೨ ವರ್ಷ ಬೇಕಾಗಬಹುದು. ಕಲ್ಲು ನಿರ್ಮಿಸಲು ಬೇರೆ ಸಮಯ ತಗಲುತ್ತದೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !