ಕುತುಬಮಿನಾರ್ ನಲ್ಲಿ ಪೂಜೆ ಮಾಡಲು ನೀಡಬೇಕೆಂಬ ಬೇಡಿಕೆಯ ಮೇಲೆ ಇಂದು ವಿಚಾರಣೆ.

ವಾರಾಣಸಿ (ಉತ್ತರಪ್ರದೇಶ) ಕುತುಬ್ ಮಿನಾರ ಪರಿಸರದಲ್ಲಿ ೨೭ ಹಿಂದೂ ಮತ್ತು ಜೈನ ಮಂದಿರಗಳ ಅವಶೇಷ ಹರಡಿದೆ. ನಮ್ಮ ಹತ್ತಿರ ಎಷ್ಟೊಂದು ಸಾಕ್ಷಿಗಳಿವೆ ಎಂದರೆ ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ, ಎಂದು ಈ ಪ್ರಕರಣದಲ್ಲಿನ ಮನವಿ ಕರ್ತೃರಾದ ಪೂ.(ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಆಜ್ ತಕ್ ಸಮಾಚಾರ ವಾಹಿನಿಯ ಜೊತೆ ಮಾತನಾಡುವಾಗ ಪ್ರತಿಪಾದಿಸಿದರು. ಮೇ ೨೪ ರಂದು ಇಲ್ಲಿ ಹಿಂದುಗಳಿಗೆ ಪೂಜೆ ಮಾಡುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯ ಮೇಲೆ ವಿಚಾರಣೆ ನಡೆಯಲಿದೆ ಈ ಸಂದರ್ಭದಲ್ಲಿ ಪೂ.(ನ್ಯಾಯವಾದಿ) ಹರಿಶಂಕರ ಜೈನ್ ಇವರಿಗೆ ಪ್ರಶ್ನೆ ಕೇಳಲಾಗಿತ್ತು.
सुनवाई से पहले याचिकाकर्ता हरिशंकर जैन ने कुतुब मीनार को लेकर बड़ा दावा किया है
(@varunjournalist ) https://t.co/EXsbZPLQ2Y— AajTak (@aajtak) May 23, 2022
ಪೂ.(ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಮಂಡಿಸಿದ ಅಂಶಗಳು
೧. ಕುತುಬಮಿನಾರಿನ ದಕ್ಷಿಣಕ್ಕೆ ಇರುವ ಲೋಕಸ್ಥಂಭದ ಎದುರು ಕಾಣಿಸುವಂತಹ ಎಲ್ಲ ಕಲಾಕೃತಿಗಳು ಮಂದಿರದ ಅವಶೇಷಗಳಾಗಿವೆ. ಇಂತಹ ಕಲಾಕೃತಿಗಳು ಹಿಂದೂಗಳ ಮಂದಿರದಲ್ಲಿ ಸಹಜವಾಗಿ ಕಾಣುತ್ತದೆ. ಇಲ್ಲಿಯ ಪರಿಸರವನ್ನು ಮಂದಿರದ ಅವಶೇಷಗಳಿಂದ ಕಟ್ಟಲಾಗಿದೆ.
೨. ನಮ್ಮ ಹತ್ತಿರ ಎಷ್ಟು ಸಾಕ್ಷಿಗಳಿವೆ ಅದೆಲ್ಲವೂ ಪುರಾತತ್ವ ಇಲಾಖೆಯ ಪುಸ್ತಕದಲ್ಲಿನದ್ದಾಗಿವೆ. ಪುರಾತತ್ವ ಇಲಾಖೆಯ ಅಂಬೋಣ ಏನೆಂದರೆ, ಈ ಅವಶೇಷಗಳು ಮಂದಿರದ್ದಾಗಿದೆ. ಇಲ್ಲಿಯ ಮಂದಿರದಲ್ಲಿ ಹಿಂದು ಮತ್ತು ಜೈನ ಈ ಎರಡು ಧರ್ಮದ ಜನರು ಪೂಜೆ ಸಲ್ಲಿಸುತ್ತಿದ್ದರು.
೩. ಹಿಂದೂ ಮತ್ತು ಜೈನ ಇವರನ್ನು ಬೇರೆಬೇರೆ ಎಂದುಕೊಳ್ಳಬೇಡಿ. ಏಕೆಂದರೆ ಜೈನಮಂದಿರದಲ್ಲಿ ಹಿಂದೂಗಳ ದೇವತೆಗಳ ಮೂರ್ತಿಗಳು ಇದ್ದವು ಮತ್ತು ಜನರು ಅದರ ಪೂಜೆ ಸಹ ಮಾಡುತ್ತಿದ್ದರು. ಎಲ್ಲಿ ಜೈನಮಂದಿರ ಗಳು ಇದ್ದವು ಅದರ ಹತ್ತಿರ ಹಿಂದೂಗಳ ಮಂದಿರಗಳು ಸಹ ಕಟ್ಟಲಾಗುತ್ತಿತ್ತು. ಕುತುಬಮಿನಾರ್ ಇದು ಅದರ ಒಂದು ಉತ್ತಮ ಉದಾಹರಣೆಯಾಗಿದೆ.
೪. ಈ ಸಾಕ್ಷಿಗಳ ಆಧಾರದಲ್ಲಿ ನ್ಯಾಯಾಲಯದಲ್ಲಿ ನನ್ನ ಒಂದೇ ಮನವಿ ಏನೆಂದರೆ, ಇಲ್ಲಿ ಪೂಜೆ ಮಾಡಲು ಅನುಮತಿ ನೀಡಿ. ಅಲ್ಲಿ ಮೊದಲೆಲ್ಲಾ ಏನೆಲ್ಲಾ ನಡೆದಿದೆ ಅದು ಈಗ ಬದಲಾಯಿಸಲು ಆಗುವುದಿಲ್ಲ, ಆದರೆ ಪೂಜೆ ಮಾಡುವ ಅಧಿಕಾರ ದೊರೆಯಬೇಕು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation