
ಗುರುಗ್ರಾಮ (ಹರಿಯಾಣ) – ಇಲ್ಲಿನ ನಗರ ವಸತಿ ಅಭಿವೃದ್ಧಿ ಪ್ರಾಧಿಕಾರದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆಮ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಾಧ್ಯಕ್ಷೆ ನಿಶಾ ಸಿಂಗ ಸೇರಿದಂತೆ ಒಟ್ಟು ೧೦ ಮಹಿಳೆಯರಿಗೆ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೧೦೦೦೦ ರೂಪಾಯಿ ದಂಡ ವಿಧಿಸಲಾಗಿದೆ. ಮೇ ೧೫, ೨೦೧೫ರಂದು ಈ ಘಟನೆ ನಡೆದಿತ್ತು. (ಘಟನೆ ನಡೆದು ೭ ವರ್ಷ ಕಳೆದ ಮೇಲೆ ಶಿಕ್ಷೆಯಾಗುವುದು ನ್ಯಾಯವಲ್ಲ, ಅನ್ಯಾಯವೆ ಆಗಿದೆ ! ಅಪರಾಧಿಗಳಿಗೆ ತಕ್ಷಣ ಶಿಕ್ಷೆಯಾದರೆ ದೇಶದಲ್ಲಿ ಅಪರಾಧ ಕೃತ್ಯಗಳು ನಿಲ್ಲುತ್ತವೆ ಎಂಬುದನ್ನು ಸರಕಾರ ಅರಿತುಕೊಳ್ಳಬೇಕು ! – ಸಂಪಾದಕರು) ಈ ದಳದಿಂದ ಸೆಕ್ಟರ ೪೭ ರಲ್ಲಿ ಅತಿಕ್ರಮಣವನ್ನು ತೆರವುಗೊಳಿಸುತ್ತಿರುವಾಗ ಅವರ ಮೇಲೆ ನಿಶಾ ಸಿಂಗ ಮತ್ತು ಇತರ ಜನರು ಕಲ್ಲುತೂರಾಟ ನಡೆಸಿದ್ದರು. (ಅತಿಕ್ರಮಣವನ್ನು ತೆರವುಗೊಳಿಸಲು ವಿರೋಧಿಸುವ ಜನಪ್ರತಿನಿಧಿಗಳು ಜನತಾದ್ರೋಹಿಗಳೇ ಆಗುತ್ತಾರೆ ! – ಸಂಪಾದಕರು) ನಿಶಾ ಸಿಂಗ ಇವರು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕಲ್ಲು ತೂರಾಟದಲ್ಲಿ ೧೫ ಪೊಲೀಸ ಸಿಬ್ಬಂದಿ ಗಾಯಗೊಂಡಿದ್ದರು.
Manish Sisodia’s close aide Nisha Singh sentenced to 7 years in prison: Here’s a list of apologists who whitewashed her criminal conducthttps://t.co/WYPWqVWARB
— OpIndia.com (@OpIndia_com) April 30, 2022
ಸಂಪಾದಕೀಯ ನಿಲುವುಹಿಂಸಾಚಾರ ಮಾಡುವವರ ವಿರುದ್ದ ಇಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕು ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ