
ಸಹಾರನಪುರ (ಉತ್ತರ ಪ್ರದೇಶ) – ಭಯೋತ್ಪಾದಕ ನಿಗ್ರಹ ದಳವು ದೆವಬಂದನ ದಾರುಲ ಉಲುಮ ಎಂಬ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಒಬ್ಬ ಬಾಂಗ್ಲಾದೇಶಿ ಯುವಕನನ್ನು ಬಂಧಿಸಿದೆ. ಆತ ನಕಲಿ ಗುರುತಿನ ಚೀಟಿಯ ಮೂಲಕ ಇಲ್ಲಿ ಶಿಕ್ಷಣ ಪಡೆಯುತ್ತಿದ್ದನು. ಈ ಯುವಕನಿಂದ ಬಾಂಗ್ಲಾದೇಶದ ದುಡ್ಡು, ಪುಸ್ತಕಗಳು ಮತ್ತು ಅನ್ಯ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಯುವಕ ಪಾಕಿಸ್ತಾನದ ಜೊತೆಗೆ ಸಂಬಂಧವಿಟ್ಟುಕೊಂಡಿದ್ದ ಎಂದು ಪೊಲೀಸರು ಅನುಮಾನಪಟ್ಟಿದ್ದಾರೆ ಈ ಯುವಕ ೨೦೧೫ ರಿಂದ ದೇವಬಂದ ಇಲ್ಲಿ ವಾಸಿಸುತ್ತಿದ್ದ. (ಸರಿಸುಮಾರು ೭ ವರ್ಷಗಳಿಂದ ಈ ಯುವಕ ಭಾರತದಲ್ಲಿ ನುಸುಳಿ ಬಂದು ವಾಸಿಸುತ್ತಿದ್ದರೂ, ರಕ್ಷಣಾ ವ್ಯವಸ್ಥೆಗೆ ಇದರ ಮಾಹಿತಿ ಇರಲಿಲ್ಲ, ಇದು ನಾಚಿಕೆಗೇಡು ! ಹೀಗೆ ಎಷ್ಟು ಬಾಂಗ್ಲಾದೇಶಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬುದಕ್ಕೆ ಲೆಕ್ಕ ಇಲ್ಲ. ಅವರನ್ನು ಹುಡುಕಿ ಭಾರತದಿಂದ ಯಾವಾಗ ಹೊರಗೆ ಅಟ್ಟುತ್ತಾರೆಯೋ ಎಂಬ ಪ್ರಶ್ನೆ ! – ಸಂಪಾದಕರು) ಅವನ ಹೆಸರು ತಲಹಾ ತಾರುಲಕದಾರ ಬಿನ ಫಾರುಕ ಎಂದಿದ್ದು, ಅವನು ಬಾಂಗ್ಲಾದೇಶದ ಚಿತಗಾವ ನಿವಾಸಿ. ಅವನು ಮೇಘಾಲಯದಿಂದ ನಕಲಿ ಆಧಾರಕಾರ್ಡ ಕೂಡ ಮಾಡಿಸಿಕೊಂಡಿದ್ದಾನೆ.
Uttar Pradesh: ATS arrests a Bangladeshi student with suspected Pakistan link from Darul Uloom in Deoband, recovers fake Indian IDshttps://t.co/gRDXyCtK0S
— OpIndia.com (@OpIndia_com) April 29, 2022
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ