ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ವಾಮನ ಆಚಾರ್ಯ ಮತ್ತು ಸೌ. ಭವ್ಯಾ ಗೌಡ

ಬೆಂಗಳೂರು – ಏಪ್ರಿಲ್ ೧೩ ರಂದು ಇಲ್ಲಿನ  ಬಸವೇಶ್ವರ ನಗರದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀ. ವಾಮನ ಆಚಾರ್ಯ ಇವರು ‘ಹಿಂದೂಗಳಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಬೇಕು’, ಎಂದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯಾ ಗೌಡ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

ತುಮಕೂರು – ಇಲ್ಲಿನ ಕುದೂರಿನ ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ ೧೫ ನೆರವೇರಿದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ವರದಿಗಾರರು ಮತ್ತು ಉಪನ್ಯಾಸಕರಾದ ಗಂ.ದಯಾನಂದರವರು ಮಾತನಾಡುತ್ತಾ, ‘ಹಿಂದೂ ಸಂಘಟನೆಗಳು ಒಂದಾಗಬೇಕು’ ಎಂದು ಕರೆ ನೀಡಿದರು.  ಹಿಂದೂ ಜನಜಾಗೃತಿ ಸಮಿತಿಯ ಸೌ. ಸುಮಾ ಮಂಜೇಶ ಇವರೂ ಮಾರ್ಗದರ್ಶನ ಮಾಡಿದರು.

ಉತ್ತರ ಕನ್ನಡ – ಇತ್ತೀಚೆಗೆ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಲಂಬಾಪುರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಸುಬ್ರಾಯ ಹೆಗಡೆಯವರು ಧರ್ಮಪಾಲನೆಯ ಮಹತ್ವವನ್ನು ತಿಳಿಸಿದರು. ಈ ವೇಳೆ ಧರ್ಮಪ್ರೇಮಿ ಶ್ರೀ. ಶ್ರೀಧರ ಹೆಗಡೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ. ರೇವತಿ ಹರಗಿಯವರೂ ಮಾತನಾಡಿದರು.

ಅದೇ ರೀತಿ ಜಿಲ್ಲೆಯ ಕಡವಾಡದ ಏಪ್ರಿಲ್ ೧೭ ರಂದು ಶ್ರೀ ಮಹಾದೇವ ದೇವಸ್ಥಾನದಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯು ನೆರವೇರಿತು. ಈ ವೇಳೆ ಭಾಜಪದ ಮುಖಂಡರಾದ ಶ್ರೀ. ಸುಭಾವ ಗುನಗಿ ಇವರು ಹಾಗೂ ಸಮಿತಿಯ ಶ್ರೀ. ಶರತಕುಮಾರ ಇವರು ಮಾರ್ಗದರ್ಶನ ಮಾಡಿದರು.