ಜೋಧಪುರ ಉಚ್ಚ ನ್ಯಾಯಾಲಯದ ತೀರ್ಪು

ಜೋಧಪುರ (ರಾಜಸ್ಥಾನ) – ಜೋಧಪುರ ಉಚ್ಚ ನ್ಯಾಯಾಲಯವು ಋಗ್ವೇದದಂತಹ ಹಿಂದೂ ಧರ್ಮಗ್ರಂಥ ಸಹಿತ ಜ್ಯೂ, ಕ್ರೈಸ್ತ ಹಾಗೂ ಇಸ್ಲಾಂ ಪಂಥಗಳ ಸಿದ್ಧಾಂತಗಳ ಆಧಾರವನ್ನು ನೀಡುತ್ತಾ ಜೀವಾವಧಿ ಶೀಕ್ಷೆಯನ್ನು ಅನುಭವಿಸುತ್ತಿರುವ ೩೪ ವರ್ಷದ ಕೈದಿ ನಂದಲಾಲನನ್ನು ಆತನ ಪತ್ನಿ ರೇಖಾ ಗರ್ಭಿಣಿಯಾಗಬೇಕು ಎಂಬ ಕಾರಣಕ್ಕೆ ೧೫ ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದೆ.
जोधपुर हाईकोर्ट ने एक महिला की याचिका पर उसके कैदी पति को 15 दिनों के पैरोल पर इसलिए रिहा करने का आदेश दिया है ताकि कैदी की पत्नी गर्भधारण कर सके. #Jodhpurhttps://t.co/XjlCKkZ8na
— AajTak (@aajtak) April 14, 2022
ನ್ಯಾಯಾಲಯವು, ಜೈಲು ಶಿಕ್ಷೆಯು ಕೈದಿಯ ಪತ್ನಿಯ ಲೈಂಗಿಕ ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಪರಿಣಾಮ ಬೀರಿದೆ. ೧೬ ಸಂಸ್ಕಾರಗಳ ಪೈಕಿ ಮಗುವನ್ನು ಹಡೆಯುವುದು ಮಹಿಳೆಯ ಮೊದಲ ಹಕ್ಕಾಗಿದೆ. ವಂಶವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಂತಾನ ಇರುವುದು, ಧಾರ್ಮಿಕ ತತ್ವಶಾಸ್ತ್ರ, ಭಾರತೀಯ ಸಂಸ್ಕೃತಿ ಮತ್ತು ನ್ಯಾಯಾಲಯದ ವಿವಿಧ ನಿರ್ಧಾರಗಳ ಮೂಲಕ ಇದನ್ನು ಹೇಳಲಾಗಿದೆ. ಸಂತಾನದ ಹಕ್ಕನ್ನು ವೈವಾಹಿಕ ಸಹವಾಸದ ಮೂಲಕ ಚಲಾಯಿಸಬಹುದು. ಇದು ಅಪರಾಧಿಯನ್ನು ಸಾಮಾನ್ಯ ವ್ಯಕ್ತಿಯನ್ನಾಗಿ ಮಾಡುವ ಪರಿಣಾಮವನ್ನು ಹೊಂದಿದೆ ಮತ್ತು ಬಂಧಿತನ ನಡವಳಿಕೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಅಪರಾಧಿ ಜೈಲಿನಿಂದ ಬಿಡುಗಡೆಗೊಂಡ ನಂತರ, ಅವನಿಗೆ ಶಾಂತಿಯುತವಾಗಿ ಸಮಾಜದ ಮುಖ್ಯವಾಹಿನಿಗೆ ಮರುಪ್ರವೇಶಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪೆರೋಲ್ನ ಉದ್ದೇಶವಾಗಿದೆ. ಯಾವುದೇ ಅಪರಾಧ ಮಾಡದಿದ್ದರೂ, ಯಾವುದೇ ಶಿಕ್ಷೆಗೆ ಗುರಿಯಾಗದಿದ್ದರೂ ಕೈದಿಯ ಹೆಂಡತಿ ತನ್ನ ಸಂತಾನದ ಹಕ್ಕಿನಿಂದ ವಂಚಿತಳಾಗಿದ್ದಾಳೆ. ಹೀಗಾಗಿ, ‘ಶಿಕ್ಷೆಗೊಳಗಾದ ಕೈದಿ ತನ್ನ ಹೆಂಡತಿಯೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದುವುದನ್ನು’ ನಿರಾಕರಿಸುವುದು, ವಿಶೇಷವಾಗಿ ಸಂತಾನವೃದ್ಧಿ ಉದ್ದೇಶಕ್ಕಾಗಿ, ಅವನ ಹೆಂಡತಿಯ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!