
ಪ್ರಯಾಗರಾಜ (ಉತ್ತರಪ್ರದೇಶ) – ಅಲಾಹಾಬಾದ ಉಚ್ಚ ನ್ಯಾಯಾಲಯವು ಮುಂಬರುವ ಮಾರ್ಚ ೨೯ ರಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಾದದ ಪ್ರಕರಣದಲ್ಲಿ ನಿಯಮಿತವಾಗಿ ಆಲಿಕೆ ನಡೆಸಲು ಆದೇಶಿಸಿದೆ. ವಾರಣಾಸಿಯಲ್ಲಿನ ಅಂಜುಮನ ಇಂತೆಜಾಮಿಯಾ ಮಸೀದಿಯಿಂದ ದಾಖಲಿಸಾದ ಅರ್ಜಿಯ ಮೇಲೆ ಆಲಿಕೆ ನಡೆಯುತ್ತಿರುವಾಗ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ಪರಿಸರದ ಭಾರತೀಯ ಪುರಾತತ್ತ್ವ ಇಲಾಖೆಯಿಂದ ನಡೆಲಾಗುವ ಸಮೀಕ್ಷೆಯನ್ನು ತಡೆದಿತ್ತು.
HC to resume hearing on Kashi temple-Gyanvapi Mosque issue from March 29 https://t.co/FlP2GGnNsD
— TOI India (@TOIIndiaNews) March 24, 2022
ಆಲಿಕೆಯ ಸಮಯದಲ್ಲಿ ಕೇಂದ್ರ ಸರಕಾರದ ನ್ಯಾಯವಾದಿಗಳು ‘ಇಲ್ಲಿ ಪ್ರಾಚೀನ ಕಾಲದಿಂದ, ಅಂದರೆ ಸತ್ಯಯುಗದಿಂದ ಶಿವಮಂದಿರವು ಅಸ್ತಿತ್ವದಲ್ಲಿದ್ದು ಅದು ಸ್ವಯಂಭೂವಾಗಿದೆ. ಅದು ಈಗಲೂ ಆ ಜಾಗದಲ್ಲಿದೆ. ಈ ದೇವಸ್ಥಾನದ ನೆಲಮಾಳಿಗೆಯು ಇಂದಿಗೂ ಫಿರ್ಯಾದುದಾರರ ನಿಯಂತ್ರಣದಲ್ಲಿದೆ, ಈ ಭಾಗವು ೧೫ ನೇ ಶತಮಾನದಲ್ಲಿನ ದೇವಸ್ಥಾನದ ಭಾಗವಾಗಿದೆ. ಇದರೊಂದಿಗೆ ಆಗಸ್ಟ ೧೫, ೧೯೪೭ರಂದು ಇದು ಇರುವ ಸ್ಥಿತಿಯಲ್ಲಿಯೇ ಇರುವುದರಿಂದ ಇದಕ್ಕೆ ‘ಪ್ಲೇಸಸ್ ಆಫ್ ವರ್ಶಿಪ್’ ಕಾನೂನು ಅನ್ವಯವಾಗುವುದಿಲ್ಲ’ ಎಂದು ಹೇಳಿದರು.
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!